ಕರ್ನಾಟಕ

karnataka

ETV Bharat / state

ಗೇಟ್​ ಬಂದ್​..​ ಕೆಂಪೇಗೌಡರ ಪ್ರತಿಮೆ ನೋಡಲು ಬಂದವರಿಗೆ ನಿರಾಸೆ - ಈಟಿವಿ ಭಾರತ ಕನ್ನಡ

ನಾಡಪ್ರಭು ಕೆಂಪೇಗೌಡರ 108 ಅಡಿಗಳ ಪ್ರತಿಮೆಯನ್ನು ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ಸ್ಥಾಪಿಸಲಾಗಿದ್ದು, ಇದನ್ನು ನೋಡಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ನಿನ್ನೆ ನಡೆದ ಪ್ರತಿಭಟನೆ ಹಿನ್ನೆಲೆ ಪ್ರತಿಮೆ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ.

visitors-not-allowed-to-kempegowda-statue
ಕೆಂಪೇಗೌಡರ ಪ್ರತಿಮೆ ನೋಡಲು ಬಂದವರಿಗೆ ನಿರಾಸೆ : ಗೇಟ್​ ಬಂದ್​​

By

Published : Nov 13, 2022, 5:50 PM IST

Updated : Nov 13, 2022, 5:59 PM IST

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ):ನಾಡಪ್ರಭು ಕೆಂಪೇಗೌಡರ 108 ಅಡಿಗಳ ಪ್ರತಿಮೆಯನ್ನು ಎರಡು ದಿನಗಳ ಹಿಂದೆಯಷ್ಟೇ ಪ್ರಧಾನಿ ಮೋದಿ ವಿಮಾನ ನಿಲ್ದಾಣದಲ್ಲಿ ಉದ್ಘಾಟನೆ ಮಾಡಿದ್ದರು. ಇನ್ನು ಏರ್​​ಪೋರ್ಟ್​ನಲ್ಲಿ ಕೆಂಪೇಗೌಡ ಪ್ರತಿಮೆ ಅನಾವರಣ ಹಿನ್ನೆಲೆ, ಪ್ರತಿಮೆ ನೋಡಲು ಜನ ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ವಾರಾಂತ್ಯ ಹಿನ್ನೆಲೆ ಕುಟುಂಬ ಸಮೇತ ಜನರು ಆಗಮಿಸುತ್ತಿದ್ದು, ಪ್ರತಿಮೆ ನೋಡಲು ಬಂದವರಿಗೆ ನಿರಾಸೆ ಉಂಟಾಗಿದೆ.

ಗೇಟ್​ ಬಂದ್​..​ ಕೆಂಪೇಗೌಡರ ಪ್ರತಿಮೆ ನೋಡಲು ಬಂದವರಿಗೆ ನಿರಾಸೆ

ನಿನ್ನೆ ಜೆಡಿಎಸ್ ಪ್ರತಿಭಟನೆ ನಡೆಸಿದ ಕಾರಣ ಪ್ರತಿಮೆ ವೀಕ್ಷಣೆಗೆ ಪ್ರವೇಶ ನಿರ್ಬಂಧ ಹೇರಲಾಗಿದ್ದು, ರಸ್ತೆ ಬದಿಯಲ್ಲೇ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಪ್ರವಾಸಿಗರು ತೆರಳುತ್ತಿದ್ದಾರೆ. ಪ್ರತಿಮೆಯ ಮುಂಭಾಗದ ಗೇಟ್ ಬಂದ್ ಮಾಡಿದ ಕಾರಣ ದೂರದ‌ ಜಿಲ್ಲೆಗಳಿಂದಲೂ ಪ್ರತಿಮೆ ವೀಕ್ಷಣೆಗೆ ಆಗಮಿಸಿದ್ದ ಜನರು ನಿರಾಸೆಯಿಂದ ಹಿಂತಿರುಗುವಂತಾಗಿದೆ.

ಇನ್ನು, ಪೊಲೀಸರು ಪ್ರತಿಮೆ ಮುಂಭಾಗಕ್ಕೆ ತೆರಳಲು ಅವಕಾಶ‌ ನೀಡದ ಹಿನ್ನೆಲೆ ಕಾರ್ಗೋ ರಸ್ತೆಯಲ್ಲಿ ಸಾಲು ಸಾಲು ಕಾರುಗಳು ನಿಂತಿವೆ. ಈ ಕಾರುಗಳಲ್ಲಿ ಗುಂಪು ಗುಂಪಾಗಿ ಜನ ಬರುತ್ತಿದ್ದು, ಪ್ರವಾಸಿ ತಾಣವಾಗಿ ಏರ್​ಪೋರ್ಟ್​ ಮತ್ತು ಕೆಂಪೇಗೌಡರ ಪ್ರತಿಮೆ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ :ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ 2ರ ಸೊಬಗನ್ನು ಕಣ್ತುಂಬಿಕೊಳ್ಳಿ

Last Updated : Nov 13, 2022, 5:59 PM IST

ABOUT THE AUTHOR

...view details