ಬೆಂಗಳೂರು/ ಹೊಸಕೋಟೆ:ರಾಜ್ಯದಲ್ಲಿ ಕೊರೋನಾ ಭೀತಿ ಹೆಚ್ಚಾಗಿದ್ದು, ಗ್ರಾಮೀಣ ಭಾಗಗಳಲ್ಲಿ ಸಹ ಭಯದ ವಾತಾವರಣ ನಿರ್ಮಾಣವಾಗಿದೆ. ಈ ನಡುವೆ ಬೆಂಗಳೂರಿನಿಂದ ಹಳ್ಳಿಗಳತ್ತ ಜನ ಸಾಲು ಸಾಲಾಗಿ ಹೊರಟಿರೋ ಪರಿಣಾಮ ಗ್ರಾಮಸ್ಥರಲ್ಲಿ ಭಯ ಮೂಡಿಸಿದೆ. ಇದೇ ಕಾರಣಕ್ಕೆ ಯಾರೂ ಸಹ ಹಳ್ಳಿ ಪ್ರವೇಶ ಮಾಡದಂತೆ ಊರಿನವರೆಲ್ಲಾ ಸೇರಿ ನಿರ್ಬಂಧ ಹೇರಿದ್ದಾರೆ.
ಹೆಚ್ಚಾದ ಕೊರೊನಾ ಭೀತಿ : ರಸ್ತೆ ಬಂದ್ ಮಾಡುತ್ತಿರುವ ಹಳ್ಳಿಗರು - corona effect
ಕೊರೊನಾ ಭೀತಿಯಿಂದಾಗಿ ಬೆಂಗಳೂರಿಗರು ಹಳ್ಳಿ ಕಡೆ ಮುಖ ಮಾಡುತ್ತಿರುವ ಪರಿಣಾಮ ಯಾರೂ ಹಳ್ಳಿಗಳಿಗೆ ಪ್ರವೇಶ ಮಾಡದಂತೆ ಗ್ರಾಮಸ್ಥರು ತಮ್ಮ ತಮ್ಮ ಊರುಗಳ ರಸ್ತೆ ಸಂಪರ್ಕವನ್ನು ಬಂದ್ ಮಾಡಿದ್ದಾರೆ.

ಹೆಚ್ಚಾದ ಕೊರೊನಾ ಭೀತಿ : ರಸ್ತೆ ಬಂದ್ ಮಾಡುತ್ತಿರುವ ಹಳ್ಳಿಗರು
ಹೆಚ್ಚಾದ ಕೊರೊನಾ ಭೀತಿ : ರಸ್ತೆ ಬಂದ್ ಮಾಡುತ್ತಿರುವ ಹಳ್ಳಿಗರು
ಹಳ್ಳಿ ಜನರು ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಹತ್ತು ಅಡಿ ಎತ್ತರಕ್ಕೆ ಟ್ರ್ಯಾಕ್ಟರ್ ಮೂಲಕ ಮಣ್ಣು ಹೊಡೆದು ರೋಡ್ ಬ್ಲಾಕ್ ಮಾಡಿದ್ದಾರೆ. ಇದೇ ರೀತಿ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ವಾಗಟ ಹೊನಚನಹಳ್ಳಿ , ಮಾಕನಹಳ್ಳಿ, ಜಡಿಗೇನಹಳ್ಳಿ, ಗ್ರಾಮದ ಎಲ್ಲ ರಸ್ತೆಗಳನ್ನ ಗ್ರಾಮಸ್ಥರು ಬಂದ್ ಮಾಡಿದ್ದಾರೆ. ಈ ಮೂಲಕ ಯಾರೂ ಹೊರಗಿನವರು ಊರಿಗೆ ಪ್ರವೇಶಿಸದಂತೆ ಎಚ್ಚರಿಕೆ ವಹಿಸಿದ್ದು, ಗ್ರಾಮದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.