ಕರ್ನಾಟಕ

karnataka

ETV Bharat / state

ಸಹೋದರಿಯ ಮದುವೆಗಾಗಿ ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಅರೆಸ್ಟ್​ - Dabas pete police

ಸಹೋದರಿಯ ಮದುವೆಗೆಂದು ಮನೆಗಳ್ಳನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ದಾಬಸ್ ಪೇಟೆ  ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 15 ಲಕ್ಷದ 8 ಸಾವಿರ ರೂ. ಮೌಲ್ಯದ 300 ಗ್ರಾಂ ಚಿನ್ನ, 1,420 ಗ್ರಾಂ ಬೆಳ್ಳಿ, 5 ವಾಚ್, 2 ಕ್ಯಾಮೆರಾ ವಶಪಡಿಸಿಕೊಳ್ಳಲಾಗಿದೆ.

two-thieves-arrest-in-nelamangala
ಮದುವೆಗಾಗಿ ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಅರೆಸ್ಟ್​

By

Published : Jan 8, 2021, 1:03 PM IST

ನೆಲಮಂಗಲ (ಬೆಂಗಳೂರು ಗ್ರಾಮಾಂತರ):ಸಹೋದರಿಯ ಮದುವೆ ಮಾಡಲು ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ದಾಬಸ್ ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಎಂಎಸ್ ಪಾಳ್ಯದ ಶೇಖ್ ಸಲ್ಮಾನ್ ಮತ್ತು ತಬರೇಜ್ ಬಂಧಿತ ಆರೋಪಿಗಳು. ದಾಬಸ್ ಪೇಟೆ ಹಳೆ ಸಂತೆಬೀದಿಯ ಛಾಯಶಂಕರ್ ಎಂಬುವರು ಡಿಸೆಂಬರ್​ 10ರಂದು ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ತೆರಳಿದ್ದರು. ಈ ವೇಳೆ ಆರೋಪಿಗಳು ಅವರ ಮನೆಯ ಹಿಂಬದಿಯ ಬಾಗಿಲು ಮುರಿದು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಕುರಿತು ಛಾಯಶಂಕರ್, ದಾಬಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ವಿದ್ಯಾರಣ್ಯಪುರದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 15 ಲಕ್ಷದ 8 ಸಾವಿರ ರೂ. ಮೌಲ್ಯದ 300 ಗ್ರಾಂ ಚಿನ್ನ, 1,420 ಗ್ರಾಂ ಬೆಳ್ಳಿ, 5 ವಾಚ್, 2 ಕ್ಯಾಮೆರಾ ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ಸಮಯದಲ್ಲಿ ಶೇಖ್ ಸಲ್ಮಾನ್ ಸಹೋದರಿಯ ಮದುವೆಗಾಗಿ ಮನೆಗಳ್ಳತನ ಮಾಡುತ್ತಿರುವುದಾಗಿ ಬಾಯ್ಬಿಟ್ಟಿದ್ದಾನೆ.

ಕದ್ದ ಚಿನ್ನಾಭರಣಗಳನ್ನ ಶೇಖ್ ಸಲ್ಮಾನ್ ತನ್ನ ಸ್ನೇಹಿತ ತಬರೇಜ್ ಮೂಲಕ ಗಿರವಿ ಇಡುತ್ತಿದ್ದ. ಟೀ ಕುಡಿಯುವ ನೆಪದಲ್ಲಿ ನಾಲ್ಕೈದು ದಿನ ಮನೆಯವರ ಚಲನ-ವಲನ ಗಮನಿಸಿ ಕಳ್ಳತನ ಮಾಡುತ್ತಿದ್ದರು.

ABOUT THE AUTHOR

...view details