ಕರ್ನಾಟಕ

karnataka

By

Published : Nov 19, 2021, 3:44 PM IST

ETV Bharat / state

ರಸ್ತೆಗುಂಡಿ ತಪ್ಪಿಸಲು ಹೋಗಿ ಬೈಕ್ ಸ್ಕಿಡ್: ನೆಲಮಂಗಲದಲ್ಲಿ ಟ್ರ್ಯಾಕ್ಟರ್ ಹರಿದು ಬಾಲಕ ಸಾವು

ನೆಲಮಂಗಲದ ರೇಣುಕಾ ನಗರದ ಬಳಿ ರಸ್ತೆಗುಂಡಿ ತಪ್ಪಿಸಲು ಹೋಗಿ ಬೈಕ್ ಸವಾರನ ನಿಯಂತ್ರಣ ತಪ್ಪಿ ಬೈಕ್​​​ ಸ್ಕಿಡ್​​ ಆಗಿದೆ. ಈ ವೇಳೆ ಬೈಕ್​ನ ಹಿಂಬದಿ ಕುಳಿತಿದ್ದ ಬಾಲಕ ಕೆಳಗೆ ಬಿದ್ದಿದ್ದಾನೆ. ಇದೇ ವೇಳೆ, ಹಿಂಬದಿಯಿಂದ ಬಂದಿರುವ ಟ್ರ್ಯಾಕ್ಟರ್ ಆತನ ಮೇಲೆ ಹರಿಯಿತು.

ಟ್ರ್ಯಾಕ್ಟರ್ ಹರಿದು ಬಾಲಕ ಸಾವು
ಟ್ರ್ಯಾಕ್ಟರ್ ಹರಿದು ಬಾಲಕ ಸಾವು

ನೆಲಮಂಗಲ: ರಸ್ತೆಯಲ್ಲಿನ ಗುಂಡಿ ತಪ್ಪಿಸಲು ಹೋಗಿ ಬೈಕ್ ಸವಾರನ ನಿಯಂತ್ರಣ ತಪ್ಪಿ ಬೈಕ್​​​ ಸ್ಕಿಡ್​​ ಆಗಿದ್ದು, ಬೈಕ್​ನ ಹಿಂಬದಿ ಕುಳಿತಿದ್ದ ಬಾಲಕ ರಸ್ತೆಗೆ ಬಿದ್ದಿದ್ದಾನೆ. ಇದೇ ವೇಳೆ, ಹಿಂಬದಿಯಿಂದ ಬಂದಿರುವ ಟ್ರ್ಯಾಕ್ಟರ್ ಆತನ ಮೈಮೇಲೆ ಹರಿದಿದ್ದು, ಬಾಲಕ ಸ್ಥಳದಲ್ದೇ ಸಾವನ್ನಪ್ಪಿದ್ದಾನೆ.

ನೆಲಮಂಗಲದ ರೇಣುಕಾ ನಗರದ ಬಳಿ ಈ ಘಟನೆ ನಡೆಯಿತು. 15 ವರ್ಷದ ಇಸ್ಲಾಂಪುರ ಗ್ರಾಮದ ಮೊಹ್ಮದ್ ಹ್ಯಾರಿಸ್ ಎಂಬ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ. ದ್ವಿಚಕ್ರವಾಹನ ಚಾಲನೆ ಮಾಡುತ್ತಿದ್ದ ಮೊಹ್ಮದ್ ಅಲ್ತಾಫ್ ಅಪಾಯದಿಂದ ಪಾರಾಗಿದ್ದಾನೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಸ್ತೆಯಲ್ಲಿನ ಗುಂಡಿಗಳು ವಾಹನ ಸವಾರರ ಜೀವವನ್ನು ಬಲಿ ಪಡೆಯುತ್ತಿವೆ. ಮಳೆಯಿಂದಾಗಿ ರಸ್ತೆಯಲ್ಲಿನ ಗುಂಡಿಗಳು ಯಾವುದು?, ರಸ್ತೆ ಯಾವುದೆಂದು ತಿಳಿಯದೆ ಅಪಘಾತಗಳು ನಡೆಯುತ್ತಿವೆ.

ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟ್ರ್ಯಾಕ್ಟರ್​ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ABOUT THE AUTHOR

...view details