ಕರ್ನಾಟಕ

karnataka

By

Published : Aug 5, 2019, 5:39 PM IST

ETV Bharat / state

ನಾಗರ ಪಂಚಮಿ.. ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ..

ಇಂದು ನಾಡಿನಾದ್ಯಂತ ನಾಗರ ಪಂಚಮಿ ಆಚರಣೆ ಮಾಡಲಾಗುತ್ತಿದ್ದು, ದೇವನಹಳ್ಳಿಯಲ್ಲಿರುವ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಚೌಡೇಶ್ವರಿ ದೇವಾಲಯ,chowdeshwari temple

ಬೆಂಗಳೂರು: ನಾಗ‌ರ ಪಂಚಮಿ ಪ್ರಯುಕ್ತ ದೇವನಹಳ್ಳಿಯಲ್ಲಿರುವ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ನಾಗರಪಂಚಮಿ ಹಿನ್ನೆಲೆಯಲ್ಲಿ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು

ಇಂದು ಬೆಳಗ್ಗೆಯಿಂದಲೇ ಭಕ್ತಾಧಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದರು. ಬನಶಂಕರಿಯಲ್ಲಿರುವ ಚೌಡೇಶ್ವರಿ ದೇವಿಯಂತೆ ದೇವನಹಳ್ಳಿಯಲ್ಲಿನ ಚೌಡೇಶ್ವರಿ ದೇವಿಯ‌ ದರ್ಶನ ಪಡೆಯಲು ಬೆಂಗಳೂರು ಗ್ರಾಮಾಂತರ ಜಿಲ್ಲೆ‌‌ ಸೇರಿದಂತೆ ಚಿಕ್ಕಬಳ್ಳಾಪುರ, ಕೋಲಾರ, ದೊಡ್ಡಬಳ್ಳಾಪುರ, ಹೊಸಕೋಟೆ ಸೇರಿದಂತೆ ಹೊರ ರಾಜ್ಯಗಳಿಂದಲೂ ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಬರ್ತಾರೆ.

ಈ ದೇವಿಯ ಬಳಿ‌ ಏನೇ ಬೇಡಿಕೊಂಡರೂ ವರ ಫಲಿಸುತ್ತದೆ ಎನ್ನುವ ನಂಬಿಕೆಯಿಂದ ನೂರಾರು ಕಿ.ಮೀ ದೂರದಿಂದ ಭಕ್ತರು ಬಂದು ಪೂಜೆ ಮಾಡಿಸುತ್ತಾರೆ. ನಾಗರ ಪಂಚಮಿ ಪ್ರಯುಕ್ತ ಇಂದು ಅನ್ನದಾಸೋಹ ಕೂಡ ನೆರವೇರಿಸಲಾಯಿತು.

ABOUT THE AUTHOR

...view details