ಕರ್ನಾಟಕ

karnataka

ETV Bharat / state

ಇತರೆ ಪಕ್ಷದ ಶಾಸಕ, ಸಂಸದರನ್ನು ಬಿಜೆಪಿ ಕಡೆಗಣಿಸುತ್ತಿದೆ: ಶರತ್ ಬಚ್ಚೇಗೌಡ ಟೀಕೆ - MLA sharat Bacchegowda reaction over Ramanagara incident

ಸರ್ಕಾರ ಜನರ ಹೋರಾಟದ ವಿರುದ್ಧ ನಿಂತಿದೆ. ಮೇಕೆದಾಟು ಯೋಜನೆ ಜಾರಿ ಮಾಡದ ಬಿಜೆಪಿ, ಕಾಂಗ್ರೆಸ್​ ಹೋರಾಟವನ್ನು ಹತ್ತಿಕ್ಕಲು ಹುನ್ನಾರ ಮಾಡ್ತಿದೆ. ಪಾದಯಾತ್ರೆ ಮೊಟಕುಗೊಳಿಸಲು ಸರ್ಕಾರ ಕೈ ಹಾಕಿದ್ರೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರು ತೆಗೆದುಕೊಳ್ಳುವ ತಿರ್ಮಾನಕ್ಕೆ ಬದ್ಧರಾಗಿರುವುದಾಗಿ ಶಾಸಕ ಶರತ್​ ಬಚ್ಚೇಗೌಡ ತಿಳಿಸಿದರು.

sharat bacchegowda
ಶರತ್ ಬಚ್ಚೇಗೌಡ ಟೀಕೆ

By

Published : Jan 4, 2022, 11:00 PM IST

ದೇವನಹಳ್ಳಿ:ರಾಮನಗರದಲ್ಲಿ ಸೋಮವಾರ ನಡೆದದ್ದು ಸರ್ಕಾರಿ ಕಾರ್ಯಕ್ರಮವಾಗಿರದೇ ಬಿಜೆಪಿ ಕಾರ್ಯಕ್ರಮವಾಗಿತ್ತು. ಬಿಜೆಪಿ ಇತರೆ ಪಕ್ಷದ ಶಾಸಕ, ಸಂಸದರನ್ನು ಕಡೆಗಣಿಸುತ್ತಿದೆ ಎಂದು ಶಾಸಕ ಶರತ್​ ಬಚ್ಚೇಗೌಡ ಆರೋಪಿಸಿದರು.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾರ್ಯಕ್ರಮಗಳಿಗೆ ಬಿಜೆಪಿ ಸರ್ಕಾರ ಪ್ರೋಟೋಕಾಲ್​ ಪಾಲನೆ ಮಾಡ್ತಿಲ್ಲ. ಯಾವ ಜಿಲ್ಲೆಯಲ್ಲಿಯೂ ಸರಿಯಾಗಿ‌ ಉಸ್ತುವಾರಿ ಸಚಿವರನ್ನು ನೇಮಕ ಮಾಡಿಲ್ಲ. ಸ್ಥಳೀಯ ಮಟ್ಟದಲ್ಲಿ ಶಾಸಕರು, ಸಂಸದರನ್ನ ಬಿಜೆಪಿ‌ ಕಡೆಗಣಿಸುತ್ತಿದೆ. ಸೋಮವಾರ ನಡೆದಿದ್ದು ಪಕ್ಷದ ಕಾರ್ಯಕ್ರಮವಲ್ಲ, ಇದೊಂದು ಸರ್ಕಾರಿ ಕಾರ್ಯಕ್ರಮವಾಗಿತ್ತು. ಇಂತಹ ಕಾರ್ಯಕ್ರಮದಲ್ಲಿ ಏಕಾಧಿಪತ್ಯ ತರಲು ಬಿಜೆಪಿ ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.

ಸರ್ಕಾರ ಜನರ ಹೋರಾಟದ ವಿರುದ್ಧ ನಿಂತಿದೆ. ಮೇಕೆದಾಟು ಯೋಜನೆ ಜಾರಿ ಮಾಡದ ಬಿಜೆಪಿ, ಕಾಂಗ್ರೆಸ್​ ಹೋರಾಟವನ್ನು ಹತ್ತಿಕ್ಕಲು ಹುನ್ನಾರ ಮಾಡ್ತಿದೆ. ಪಾದಯಾತ್ರೆ ಮೊಟಕುಗೊಳಿಸಲು ಸರ್ಕಾರ ಕೈ ಹಾಕಿದ್ರೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರು ತೆಗೆದುಕೊಳ್ಳುವ ತಿರ್ಮಾನಕ್ಕೆ ಬದ್ಧರಾಗಿರುವುದಾಗಿ ತಿಳಿಸಿದರು.

ಇದನ್ನೂ ಓದಿ:ರಾಜ್ಯದಲ್ಲಿ ವೀಕೆಂಡ್‌ ಕರ್ಫ್ಯೂ ಜಾರಿ; ಬೆಂಗಳೂರಿನಲ್ಲಿ ಶಾಲೆಗಳಿಗೆ ರಜೆ

ABOUT THE AUTHOR

...view details