ಹೊಸಪೇಟೆ:ಬಿಜೆಪಿ ನಾಯಕರು ವಿಜಯ ನಗರ ಉಪ ಚುನಾವಣೆಯಲ್ಲಿ ಶಾಸಕ ಆನಂದ ಸಿಂಗ್ ಗೆದ್ದ 24 ಗಂಟೆಗಳಲ್ಲಿ ಅವರನ್ನು ಸಚಿವರನ್ನಾಗಿ ಮಾಡುವ ಭರವಸೆ ನೀಡಿದ್ದರು.ಆದರೆ, ಈರೆಗೂ ಸಚಿವರಾಗಿಲ್ಲ ಏಕೆ ಎಂದು ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ ಶಾಸಕ ಆನಂದ್ ಸಿಂಗ್ ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮದುವೆ ಮಾಡಿಕೊಂಡಾಗಿದೆ. ಗಂಡೋ, ಹೆಣ್ಣೋ ಒಟ್ಟಿನಲ್ಲಿ ಮಗುವಾದ್ರೆ ಸಾಕು ಎನ್ನುತ್ತ ಸಚಿವ ಸ್ಥಾನ ಕೊಡಿ ಎಂಬುದನ್ನು ಪರೋಕ್ಷವಾಗಿ ಹೇಳಿದ್ರು.