ಕರ್ನಾಟಕ

karnataka

By

Published : Feb 21, 2021, 2:35 AM IST

ETV Bharat / state

ಕಂದಾಯ ಸಚಿವರಿಂದ ಗ್ರಾಮ ವಾಸ್ತವ್ಯ: ಫೈರ್ ಕ್ಯಾಂಪ್​​ನಲ್ಲಿ ಗಾಯಕರಾದ ಶಾಸಕರು!

ನೆಲಮಂಗಲ ಶಾಸಕ ಡಾ. ಶ್ರೀನಿವಾಸ ಮೂರ್ತಿ "ತರವಲ್ಲ ತಗಿ ನಿನ್ನ ತಂಬೂರಿ" ಎಂದು ಹಾಡಿದರೆ, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಎಲ್.ಎನ್ ಅವರು 'ಶರಣು ಶರಣಯ್ಯ ಶರಣು' ಎಂಬ ಹಾಡು ಹಾಡಿ ರಂಜಸಿದರು.

ಕಂದಾಯ ಸಚಿವರಿಂದ ಗ್ರಾಮ ವಾಸ್ತವ್ಯ: ಫೈರ್ ಕ್ಯಾಂಪ್​​ನಲ್ಲಿ ಗಾಯಕರಾದ ಶಾಸಕರು!
ಕಂದಾಯ ಸಚಿವರಿಂದ ಗ್ರಾಮ ವಾಸ್ತವ್ಯ: ಫೈರ್ ಕ್ಯಾಂಪ್​​ನಲ್ಲಿ ಗಾಯಕರಾದ ಶಾಸಕರು!

ದೊಡ್ಡಬಳ್ಳಾಪುರ: ಕಂದಾಯ ಸಚಿವ ಆರ್.ಅಶೋಕ್ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದಾರೆ.

ಈ ಹಿನ್ನೆಲೆ ಗ್ರಾಮದಲ್ಲಿ ಫೈರ್ ಕ್ಯಾಂಪ್ ಮಾಡಲಾಗಿದ್ದು, ಈ ವೇಳೆ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ನೆಲಮಂಗಲ ಶಾಸಕ ಡಾ.ಶ್ರೀನಿವಾಸಮೂರ್ತಿ ಹಾಡುವ ಮೂಲಕ ಮನರಂಜಿಸಿದರು.

ಕಂದಾಯ ಸಚಿವರಿಂದ ಗ್ರಾಮ ವಾಸ್ತವ್ಯ: ಫೈರ್ ಕ್ಯಾಂಪ್​​ನಲ್ಲಿ ಗಾಯಕರಾದ ಶಾಸಕರು!

ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಹೊಸಹಳ್ಳಿಯಲ್ಲಿ ನಡೆಯುತ್ತಿರುವ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಗಳ ಕಡೆ ಎಂಬ ವಿನೂತನ ರಾಜ್ಯ ಮಟ್ಟದ ಕಾರ್ಯಕ್ರಮದ ಅಂಗವಾಗಿ ಸಚಿವರು ಗ್ರಾಮ ವಾಸ್ತವ್ಯ ಮಾಡಿದ್ದಾರೆ.

ಹೊಸಹಳ್ಳಿಯ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದಲ್ಲಿ ಸಚಿವರು ತಂಗಿದ್ದಾರೆ. ಸಚಿವರಿಗಾಗಿ ಫೈರ್ ಕ್ಯಾಂಪ್ ಮಾಡಲಾಗಿದ್ದು ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ನೆಲಮಂಗಲ ಶಾಸಕ ಡಾ. ಶ್ರೀನಿವಾಸಮೂರ್ತಿ, ಹೊಸಕೋಟೆ ಶಾಸಕ ಶರತ್ ಕುಮಾರ್ ಬಚ್ಚೇಗೌಡ ಅವರು ಭಾಗಿಯಾಗಿದ್ದರು. ಈ ವೇಳೆ ಸರಿಗಮಪ ಖ್ಯಾತಿಯ ಪೊಲೀಸ್ ಇಲಾಖೆಯ ವಿ.ಸುಬ್ರಹ್ಮಣ್ಯ ಅವರು ಹಾಡುವ ಮೂಲಕ ಮನರಂಜನೆ ನೀಡಿದರು.

ABOUT THE AUTHOR

...view details