ಆನೇಕಲ್:ತೆಂಗಿನ ಮರದಿಂದ ಆಯತಪ್ಪಿ ಬಿದ್ದು ವ್ಯಕ್ತಿ ಮೃತಪಟ್ಟಿರುವ ಘಟನೆ ಕೋಣನ ಕುಂಟೆ ಬಳಿಯ ಇಂಡ್ಲವಾಡಿಯಲ್ಲಿ ನಡೆದಿದೆ.
ಆನೇಕಲ್: ತೆಂಗಿನ ಮರದಿಂದ ಆಯತಪ್ಪಿ ಬಿದ್ದು ವ್ಯಕ್ತಿ ಸಾವು - ಆನೇಕಲ್ ಪೊಲೀಸ್ ಠಾಣೆ
ತೆಂಗಿನ ಮರದಿಂದ ಆಯತಪ್ಪಿ ಬಿದ್ದು ವ್ಯಕ್ತಿ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲೂಕಿನ ಇಂಡ್ಲವಾಡಿ ಬಳಿ ನಡೆದಿದೆ.
![ಆನೇಕಲ್: ತೆಂಗಿನ ಮರದಿಂದ ಆಯತಪ್ಪಿ ಬಿದ್ದು ವ್ಯಕ್ತಿ ಸಾವು Man dies from falling from coconut tree](https://etvbharatimages.akamaized.net/etvbharat/prod-images/768-512-11077148-thumbnail-3x2-vish.jpg)
ತೆಂಗಿನ ಮರದಿಂದ ಆಯತಪ್ಪಿ ಬಿದ್ದು ವ್ಯಕ್ತಿ ಸಾವು
ಕಾಂತರಾಜು (28) ಮೃತ ವ್ಯಕ್ತಿ. ಈತನನ್ನು ತೆಂಗಿನ ಗರಿ ಕತ್ತರಿಸಲು ಇಂಡ್ಲವಾಡಿ ಮಹದೇವಪ್ಪ ಎಂಬುವವರು ಕರೆತಂದಿದ್ದರು. ಈ ವೇಳೆ 50 ಅಡಿ ಎತ್ತರದ ಮರದಿಂದ ಕೆಳಗೆ ಬಿದ್ದ ಕಾಂತರಾಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಆನೇಕಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.