ಕರ್ನಾಟಕ

karnataka

ETV Bharat / state

ರಾತ್ರಿ ಗಂಡ-ಹೆಂಡತಿ ಜಗಳ... ಬೆಳಗ್ಗೆ ಪತಿ ನೇಣಿಗೆ ಶರಣು! - husband surrender to self sucide

ಕೆರೆಯಂಗಳದ ಬಳಿ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ ರಾತ್ರಿ ತನ್ನ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ವಿಷಯ ತಿಳಿದ ಹೆಂಡತಿ ಮನೆಯವರು ರಾತ್ರಿಯೇ ಆಕೆಯನ್ನು ತವರು ಮನೆಗೆ ಕೆರೆದೊಯ್ದಿದ್ದಾರೆ. ಇನ್ನು ಬೆಳಗಾಗುವಷ್ಟರಲ್ಲಿ ಗಂಡ ಅನುಮಾನಾಸ್ಪದ ರೀತಿಯಲ್ಲಿ ನೇಣಿಗೆ ಶರಣಾಗಿದ್ದಾನೆ.

ನೇಣಿಗೆ ಶರಣು
ನೇಣಿಗೆ ಶರಣು

By

Published : Dec 4, 2020, 7:19 PM IST

ದೊಡ್ಡಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಗಂಡ-ಹೆಂಡತಿ ಜಗಳವಾಡಿದ್ದು, ಮರುದಿನ ಬೆಳಗ್ಗೆ ಗಂಡ ಅನುಮಾನಾಸ್ಪದ ರೀತಿಯಲ್ಲಿ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ದೊಡ್ಡಬೆಳವಂಗಲ ಗ್ರಾಮದ ಕೆರೆಯ ಬಳಿ ನಡೆದಿದೆ.

ಮಧುರನಹೊಸಹಳ್ಳಿಯ ಮಾರಪ್ಪ (38) ಆತ್ಮಹತ್ಯೆ ಮಾಡಿಕೊಂಡವನು. ಇಲ್ಲಿನ ಕೆರೆಯಂಗಳದ ಬಳಿ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ ರಾತ್ರಿ ತನ್ನ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ವಿಷಯ ತಿಳಿದ ಹೆಂಡತಿ ಮನೆಯವರು ರಾತ್ರಿಯೇ ಆಕೆಯನ್ನು ತವರು ಮನೆಗೆ ಕೆರೆದೊಯ್ದಿದ್ದಾರೆ. ಇನ್ನು ಬೆಳಗಾಗುವಷ್ಟರಲ್ಲಿ ಗಂಡ ಅನುಮಾನಾಸ್ಪದ ರೀತಿಯಲ್ಲಿ ನೇಣಿಗೆ ಶರಣಾಗಿದ್ದಾನೆ.

ಇದನ್ನೂ ಓದಿ...ಡ್ರಗ್ಸ್ ಜಾಲ: ನಟಿಮಣಿಯರ ಕೂದಲು ಸ್ಯಾಂಪಲ್ ಸಂಗ್ರಹಕ್ಕೆ ಅನುಮತಿ ನೀಡಿದ ಕೋರ್ಟ್

ಹೆಂಡತಿ ಎರಡನೇ ಮಗುವಿಗೆ ತುಂಬು ಗರ್ಭಿಣಿಯಾಗಿದ್ದು, ಈಕೆಯ ಮನೆಯವರೇ ಹೊಡೆದು ಕೊಲೆ ಮಾಡಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ. ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details