ಆನೇಕಲ್: ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಸರಿ, ಆದರೆ, ಬಿಜೆಪಿಯಲ್ಲಿ ಉಪ್ಪು ತಿಂದವರಿಲ್ಲವೇ? ಸಿಬಿಐ/ಇಡಿ/ಐಟಿಗಳನ್ನ ಬಿಜೆಪಿ ತನ್ನ ಸಂಸ್ಥೆಗಳಂತೆ ಛೂ ಬಿಡುತ್ತಿರುವುದನ್ನು ದೇಶದ ಬುದ್ದಿವಂತ ಜನರು ನೋಡುತ್ತಿದ್ದಾರೆ. ಬಹುಪಾಲು ಬಿಜೆಪಿಯನ್ನು ಹೊರತುಪಡಿಸಿ ಉಳಿದ ಪಕ್ಷಗಳ ಪ್ರಭಾವಿಗಳ ಮೇಲೆ ವಿನಾಕಾರಣ ಒತ್ತಡ ಹೇರುತ್ತಿರುವುದು ಖಂಡನಾರ್ಹ ಎಂದು ಆನೇಕಲ್ ಕಾಂಗ್ರೆಸ್ ಕಾರ್ಯಕರ್ತರು ಹೋರಾಟದ ಮೂಲಕ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಡಿಕೆ ಶಿವಕುಮಾರ್ ಮೇಲೆ ರಾಜಕೀಯ ಪ್ರೇರಿತ ದಾಳಿ ನಿಲ್ಲಲಿ; ಆನೇಕಲ್ ಕಾಂಗ್ರೆಸ್ ಕೇಂದ್ರಕ್ಕೆ ಎಚ್ಚರಿಕೆ..