ಕರ್ನಾಟಕ

karnataka

ETV Bharat / state

ಹೊಸಕೋಟೆ: ರಾಜಕೀಯ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾದ ಕೆಂಪೇಗೌಡರ ಜಯಂತಿ ಆಚರಣೆ

ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕೆಂಪೇಗೌಡರ ಜಯಂತಿ ಆಚರಣೆ ಮಾಡಲಾಯಿತು.

By

Published : Jun 29, 2022, 9:51 PM IST

Kempegowda's Jayanti celebration at Hoskote
ಹೊಸಕೋಟೆಯಲ್ಲಿ ಕೆಂಪೇಗೌಡರ ಜಯಂತಿ ಆಚರಣೆ

ಹೊಸಕೋಟೆ:ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕೆಂಪೇಗೌಡರ ಜಯಂತಿ ಆಚರಣೆ ಮಾಡುವ ಮೂಲಕ ಒಕ್ಕಲಿಗರ ಶಕ್ತಿ ಪ್ರದರ್ಶನ ನಡೆಯಿತು. ಇಷ್ಟು ದಿನ ತಾಲೂಕಿನಲ್ಲಿ ಎರಡು ಒಕ್ಕಲಿಗ ಸಮುದಾಯದ ಸಂಘಗಳಿದ್ದವು. ಇದೀಗ ಚುನಾವಣೆ ಸಮೀಪ ಆಗುತ್ತಿದ್ದಂತೆ ಹೊಸಕೋಟೆ ಕ್ಷೇತ್ರದಲ್ಲಿ ಎರಡು ಸಂಘಗಳು ಒಟ್ಟಾಗಿ ಒಗ್ಗಟ್ಟು ಪ್ರದರ್ಶನ ಮಾಡಿವೆ.

5 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸೇರಿದ ಒಕ್ಕಲಿಗ ಸಮಾಜದವರು ಇಂದು ಕೆಂಪೇಗೌಡರ ಜಯಂತಿ ಹೆಸರಲ್ಲಿ ಶಕ್ತಿ ಪ್ರದರ್ಶನ ಮಾಡಿದರು. ಕೆ.ಆರ್.ಸರ್ಕಲ್​ನಿಂದ ತಾಲೂಕು ಕಚೇರಿಯವರೆಗೆ ಮೆರವಣಿಗೆ ಮಾಡಿದರು.


ಇದೇ 27 ರಂದು ಹೊಸಕೋಟೆಯಲ್ಲಿ ಸಚಿವ ಎಂಟಿಬಿ ಹೊಸಕೋಟೆ ನಗರದಲ್ಲಿ ಒಕ್ಕಲಿಗ ಸಮುದಾಯದ ಸಚಿವರಾದ ಕಂದಾಯ ಸಚಿವ ಆರ್.ಅಶೋಕ್ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕರೆಸಿ ಜಯಂತಿ ಆಚರಣೆ ಮಾಡಿದ್ದರು. ಅದರ ಬೆನ್ನಲ್ಲೇ ಇಂದು ಶಾಸಕ ಶರತ್ ಬಚ್ಚೇಗೌಡ ನೇತೃತ್ವದಲ್ಲಿ ಜಯಂತಿ ಆಚರಣೆ ಮಾಡುವ ಮೂಲಕ ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ ಅನ್ನೋದನ್ನು ಪ್ರದರ್ಶನ ಮಾಡಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಶಾಸಕ ಶರತ್ ಬಚ್ಚೇಗೌಡ ಪರ ಒಕ್ಕಲಿಗ ಸಮುದಾಯದವೂ ನಿಲ್ಲಬೇಕು. ಮತ್ತೊಮ್ಮೆ ಹೊಸಕೋಟೆ ಕ್ಷೇತ್ರದಲ್ಲಿ ಶಾಸಕ ಶರತ್ ಬಚ್ಚೇಗೌಡರನ್ನ ಶಾಸಕರನ್ನಾಗಿ ಮಾಡಬೇಕು ಅಂತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖಂಡರು, ಸ್ವಾಮೀಜಿಗಳು ಹೇಳಿದರು.

ಇದನ್ನೂ ಓದಿ:ಕುಮಾರಸ್ವಾಮಿ ಎಂದರೇ ಲಾಟರಿ ಮುಖ್ಯಮಂತ್ರಿ, ಜೆಡಿಎಸ್​​ಗೆ ಇನ್ನು ಬಿಜೆಪಿ ಬೆಂಬಲವಿಲ್ಲ: ಆರ್​.ಅಶೋಕ್​

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಚುನಾವಣೆ ಬರುತ್ತಿದ್ದಂತೆ ಕೆಲವರು ಮತದಾರರನ್ನು ಕೊಂಡುಕೊಳ್ಳಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು. ಒಕ್ಕಲಿಗರ ಸಾಮುದಾಯ ಭವನಕ್ಕಾಗಿ ಹರಲೂರು ಬಳಿ ಮೂರು ಎಕ್ಕರೆ ಹತ್ತು ಗುಂಟೆ ಜಾಗವಿದ್ದು ಅದನ್ನು ನಮ್ಮ ಸಮಾಜದವರೆಲ್ಲಾ ಸೇರಿ ಸಮುದಾಯ ಭವನ ಮತ್ತು ಮಕ್ಕಳಿಗೆ ಶಾಲೆ ನಿರ್ಮಾಣ ಮಾಡಲಾಗುವುದು. ನಮ್ಮ ತಾಲೂಕಿನ ಒಕ್ಕಲಿಗ ಜನಾಂಗದಲ್ಲಿ ಯಾವುದೇ ಬಣಗಳಿಲ್ಲ ಎಲ್ಲರೂ ಒಟ್ಟಿಗಿದ್ದೇವೆ ಎಂದು ತಿಳಿಸಿದರು.

ABOUT THE AUTHOR

...view details