ಕರ್ನಾಟಕ

karnataka

ETV Bharat / state

ದೊಡ್ಡಬಳ್ಳಾಪುರ: ಪೂಜಾ ಸಾಮಗ್ರಿ ತರಲು ಹೋಗಿದ್ದ ತಂದೆ-ಮಗ ರಸ್ತೆ ಅಪಘಾತದಲ್ಲಿ ದುರ್ಮರಣ - ದೊಡ್ಡಬಳ್ಳಾಪುರದ ಶಿವಪುರ ಗ್ರಾಮದ ಬಳಿ ರಸ್ತೆ ಅಪಘಾತ

ದೊಡ್ಡಬಳ್ಳಾಪುರ ತಾಲೂಕಿನ ಶಿವಪುರ ಗ್ರಾಮದ ಬಳಿ ರಸ್ತೆ ಅಪಘಾತ ನಡೆದಿದೆ. ಘಟನೆಯಲ್ಲಿ ತಂದೆ ಮೀಸೆ ರಾಮಯ್ಯ (64) ಮಗ ನಾರಾಯಣ್ (40) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಸೊಣ್ಣಪ್ಪನಹಳ್ಳಿಯ ನಿವಾಸಿಗಳು ಎಂಬುದು ತಿಳಿದುಬಂದಿದೆ.

Accident
ಆಕ್ಸಿಡೆಂಟ್​

By

Published : Mar 15, 2022, 8:02 PM IST

ದೊಡ್ಡಬಳ್ಳಾಪುರ: ಮುನೇಶ್ವರಸ್ವಾಮಿ ಪೂಜೆಗಾಗಿ ಪೂಜಾ ಸಾಮಗ್ರಿಗಳನ್ನ ತರಲು ಬೈಕ್​ನಲ್ಲಿ ಹೊರಟಿದ್ದ ಅಪ್ಪ-ಮಗ ಅಪಘಾತದಲ್ಲಿ ದುರ್ಮರಣಕ್ಕೀಡಾಗಿರುವ ಘಟನೆ ಬೆಂಗಲೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.

ತಾಲೂಕಿನ ಶಿವಪುರ ಗ್ರಾಮದ ಬಳಿ ರಸ್ತೆ ಅಪಘಾತ ನಡೆದಿದೆ. ಘಟನೆಯಲ್ಲಿ ತಂದೆ ಮೀಸೆ ರಾಮಯ್ಯ (64) ಮಗ ನಾರಾಯಣ್ (40) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಸೊಣ್ಣಪ್ಪನಹಳ್ಳಿಯ ನಿವಾಸಿಗಳು ಎಂಬುದು ತಿಳಿದುಬಂದಿದೆ.

ತಂದೆ - ಮಗ ರಸ್ತೆ ಅಪಘಾತದಲ್ಲಿ ದುರ್ಮರಣ

ಮನೆಯಲ್ಲಿ ಮುನೇಶ್ವರಸ್ವಾಮಿ ಪೂಜಾ ಕಾರ್ಯಕ್ರಮ ಇದ್ದಿದ್ದರಿಂದ ಇಂದು ಬೆಳಗ್ಗೆ ತಂದೆ-ಮಗ ಪೂಜೆಗೆ ಬೇಕಾದ ಸಾಮಗ್ರಿಗಳನ್ನು ತರಲು ಸ್ಕೂಟರ್​ನಲ್ಲಿ ದೊಡ್ಡಬಳ್ಳಾಪುರ ನಗರಕ್ಕೆ ಹೊರಟ್ಟಿದ್ದರು. ಮಾರ್ಗ ಮಧ್ಯದಲ್ಲಿ ನಿಯಂತ್ರಣ ತಪ್ಪಿ ಸ್ಕೂಟರ್ ಮರಕ್ಕೆ ಗುದ್ದಿ ಅವಘಡ ಸಂಭವಿಸಿದೆ ಎನ್ನಲಾಗ್ತಿದೆ.

ಮತ್ತೊಂದೆಡೆ ಅಪರಿಚಿತ ವಾಹನ ಸ್ಕೂಟರ್​ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರಬಹುದೆಂಬ ಸಂಶಯವೂ ಸಹ ವ್ಯಕ್ತವಾಗಿದೆ. ಈ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ:ಹಿಜಾಬ್ ವಿರುದ್ಧದ ಹೈಕೋರ್ಟ್​ನ​ ತೀರ್ಪು ಸಂವಿಧಾನದ ಮೌಲ್ಯಗಳ ಮೇಲಿನ ದಾಳಿ : ಪಿಎಫ್​ಐ ರಾಜ್ಯಾಧ್ಯಕ್ಷ ಯಾಸಿರ್ ಹಸನ್

For All Latest Updates

TAGGED:

ABOUT THE AUTHOR

...view details