ಕರ್ನಾಟಕ

karnataka

ಬಾರುಕೋಲು ಚಳವಳಿ: ನೆಲಮಂಗಲ ನವಯುಗ ಟೋಲ್ ಬಳಿ ಪೊಲೀಸ್ ಭದ್ರತೆ

By

Published : Dec 9, 2020, 1:25 PM IST

ರಾಜಧಾನಿ ಬೆಂಗಳೂರಿನಲ್ಲಿ ರೈತರು ನಡೆಸುತ್ತಿರುವ ಬಾರುಕೋಲು ಚಳವಳಿ ಬೆಂಬಲಿಸಿ ರಾಜ್ಯದ ವಿವಿಧ ರೈತರು ಬೆಂಗಳೂರಿನತ್ತ ಆಗಮಿಸುತ್ತಿರುವ ಹಿನ್ನೆಲೆ ನೆಲಮಂಗಲದ ಟೋಲ್​ ಗೇಟ್​ ಬಳಿ ಭಾರಿ ಪೊಲೀಸ್ ಭದ್ರತೆ ಮಾಡಲಾಗಿದೆ.

farmers protest high police security near nelamangala toll
ಟೋಲ್ ಬಳಿ ಪೊಲೀಸ್ ಕಾವಲು

ನೆಲಮಂಗಲ:ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಬಾರುಕೋಲು ಚಳವಳಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ಆಗಮಿಸುತ್ತಿರುವ ಹಿನ್ನೆಲೆ ನೆಲಮಂಗಲದ ನವಯುಗ ಟೋಲ್ ಬಳಿ ಪೊಲೀಸರ ಬಂದೋಬಸ್ತ್ ಮಾಡಲಾಗಿದೆ.

ಟೋಲ್ ಬಳಿ ಪೊಲೀಸ್ ಕಾವಲು
ಮಂಗಳೂರು ಹೆದ್ದಾರಿ ಮತ್ತು ತುಮಕೂರು ಕಡೆಯಿಂದ ರೈತರು ಬರುತ್ತಿರುವ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಡಿ ಭಾಗ, ಹಳೇ ನಿಜಗಲ್ ಬಳಿ ಮತ್ತು ನೆಲಮಂಗಲದ ನವಯುಗ ಟೋಲ್ ಬಳಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಸುಮಾರು 200 ಕ್ಕೂ ಪೊಲೀಸರನ್ನ ನಿಯೋಜನೆ ಮಾಡಲಾಗಿದ್ದು, ಪೊಲೀಸರು ರೈತರನ್ನು ಇಲ್ಲಿಂದಲೇ ಮನವೊಲಿಸಿ ವಾಪಸ್ ಕಳುಹಿಸುವ ಪ್ರಯತ್ನ ಮಾಡುತ್ತಿದ್ದಾರೆ.

ABOUT THE AUTHOR

...view details