ಕರ್ನಾಟಕ

karnataka

ETV Bharat / state

'ಈಟಿವಿ ಭಾರತ್​' ವರದಿ ಫಲಶೃತಿ:  ರೆಸಾರ್ಟ್​ನಿಂದ ಸ್ಥಳಕ್ಕಾಗಮಿಸಿದ ಶಾಸಕ - undefined

'ಈಟಿವಿ ಭಾರತ್' ವರದಿಯಿಂದ ಎಚ್ಚೆತ್ತ ಶಾಸಕ ಟಿ.ವೆಂಕಟರಮಣಯ್ಯ ಅವರು ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಬಳಿ ಕುಸಿತಗೊಂಡಿದ್ದ ಮೇಲ್ಸೇತುವೆಯ ತಡಗೋಡೆ ಪರಿಶೀಲನೆ ನಡೆಸಿದರು.

ಪರಿಶೀಲನೆ ನಡೆಸಿದ ಶಾಸಕ ಟಿ.ವೆಂಕಟರಮಣಯ್ಯ

By

Published : Jul 13, 2019, 12:58 PM IST

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಬಳಿ ಮೇಲ್ಸೇತುವೆ ತಡಗೋಡೆ ಕುಸಿತದ ಕುರಿತು 'ಈಟಿವಿ ಭಾರತ್' ಮಾಡಿದ್ದ ವರದಿಯಿಂದ ಎಚ್ಚೆತ್ತ ಶಾಸಕ ಟಿ.ವೆಂಕಟರಮಣಯ್ಯ ಅವರು ತಂಗಿದ್ದ ರೆಸಾರ್ಟ್​ನಿಂದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕುಸಿದ ಮೇಲ್ಸೇತುವೆ

ಯಲಹಂಕ - ಹಿಂದೂಪುರ ರಾಜ್ಯ ಹೆದ್ದಾರಿಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ರೈಲ್ವೆ ಗೇಟ್ ಬಳಿಯ ಮೇಲ್ಸೇತುವೆ ತಡಗೋಡೆ ಶುಕ್ರವಾರ ಕುಸಿತಗೊಂಡಿತ್ತು. ಇದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿತ್ತು. ಅಲ್ಲದೆ, ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು.

ಆರು ತಿಂಗಳಲ್ಲಿ ಎರಡು ಬಾರಿ ಕುಸಿದ ಮೇಲ್ಸೇತುವೆ: ಸಾರ್ವಜನಿಕರಲ್ಲಿ ಆತಂಕ

ರಾಜ್ಯದಲ್ಲಿ ಜರುಗುತ್ತಿರುವ ಕ್ಷೀಪ್ರ ರಾಜಕೀಯ ಬೆಳವಣಿಗೆಗಳಿಂದ ಮೂರು ಪಕ್ಷಗಳ ಶಾಸಕರು ರೆಸಾರ್ಟ್​​ ಮೊರೆ ಹೋಗಿದ್ದಾರೆ. ಶಾಸಕ ಟಿ.ವೆಂಕಟರಮಣಯ್ಯ ಅವರು ಸಹ ಯಶವಂತಪುರದ ತಾಜ್ ವಿವಾಂತಾ ಹೋಟೆಲ್​ನಲ್ಲಿ ತಂಗಿದ್ದರು. ಮೇಲ್ಸೇತುವೆ ತಡೆಗೋಡೆ ವಿಷಯ ತಿಳಿಯುತ್ತಿದ್ದಂತೆ ವೆಂಕಟರಮಣಯ್ಯ ಅವರು ಹೋಟೆಲ್​ನಿಂದ ನೇರವಾಗಿ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.

ಕಳಪೆ ಕಾಮಗಾರಿಯಿಂದ ಮೇಲ್ಸೇತುವೆ ಕುಸಿದಿದೆ ಅನ್ನುವ ಆರೋಪ ಕೇಳಿ ಬಂದ ಹಿನ್ನೆಲೆ ದೂರವಾಣಿಯಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಟಿ.ವೆಂಕಟರಮಣಯ್ಯ, ಈ ಕುರಿತು ಕೆಆರ್​ಡಿಎಲ್ ಮತ್ತು ರೈಲ್ವೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ಸೇತುವೆ ನಿರ್ಮಾಣ ಆಗಿರುವುದು ರೈಲ್ವೆ ಇಲಾಖೆಯಿಂದ ಎಂದು ಹೇಳಿದರು.

ಮೇಲ್ಸೇತುವೆ ನಿರ್ಮಾಣದ ವೇಳೆ ಹಾದುಹೋಗಿದ್ದ ಹೈಟೆಂಕ್ಷನ್​ ವಿದ್ಯುತ್ ಮಾರ್ಗ ತೆರವುಗೊಳಿಸುವುದೇ ಸವಾಲಾಗಿತ್ತು. ಇದೇ ಕಾರಣಕ್ಕೆ ಮೇಲ್ಸೇತುವೆ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಈ ಸಮಯದಲ್ಲಿ ಮಳೆ ನೀರು ಸಂಗ್ರಹಗೊಂಡು ತಡಗೋಡೆಗಳು ಹಗುರಗೊಂಡಿರಬಹುದು. ಆದ್ದರಿಂದ ಕಳಚಿ ಬಿದ್ದಿರುವ ಸಾಧ್ಯತೆ ಇದೆ. ದುರುಸ್ತಿ ಮಾಡಬೇಕಾದ ಹಿನ್ನೆಲೆ ಎರಡು ತಿಂಗಳು ಮೇಲ್ಸೇತುವೆಯಲ್ಲಿ ವಾಹನ ಸಂಚಾರ ರದ್ದುಗೊಳಿಸಲಾಗಿದೆ ಎಂದು ಹೇಳಿದರು.

For All Latest Updates

TAGGED:

ABOUT THE AUTHOR

...view details