ಕರ್ನಾಟಕ

karnataka

ETV Bharat / state

ದೊಡ್ಡಬಳ್ಳಾಪುರ: ಚಿರತೆ ದಾಳಿಗೆ ಕರು ಬಲಿ

ನಂದಿಬೆಟ್ಟ ತಪ್ಪಲಿನಲ್ಲಿರುವ ಚನ್ನಾಪುರ ಗ್ರಾಮದಲ್ಲಿ ಕೃಷ್ಣಪ್ಪ ಎಂಬುವರಿಗೆ ಸೇರಿದ ಕರುವೊಂದರ ಮೇಲೆ ತಡರಾತ್ರಿ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ.

By

Published : Dec 1, 2022, 3:19 PM IST

doddaballapur-calf-killed-in-leopard-attack
ದೊಡ್ಡಬಳ್ಳಾಪುರ: ಚಿರತೆ ದಾಳಿಗೆ ಕರು ಬಲಿ

ದೊಡ್ಡಬಳ್ಳಾಪುರ: ತಾಲೂಕಿನ ನಂದಿಬೆಟ್ಟದ ತಪ್ಪಲಿನಲ್ಲಿರುವ ಚನ್ನಾಪುರ ಗ್ರಾಮದಲ್ಲಿ‌ ಚಿರತೆ ದಾಳಿ ಹೆಚ್ಚಾಗಿದ್ದು, ಸಾಕು ಪ್ರಾಣಿಗಳು ಬಲಿಯಾಗುತ್ತಿವೆ. ಗ್ರಾಮದ ಕೃಷ್ಣಪ್ಪ‌ ಎಂಬುವರ ಕರುವಿನ ಮೇಲೆ ನಿನ್ನೆ ತಡರಾತ್ರಿ ಚಿರತೆ ದಾಳಿ‌ ನಡೆಸಿ ಕೊಂದು ಹಾಕಿದೆ.

ಗ್ರಾಮ ಸುತ್ತಮುತ್ತ ಚಿರತೆ ಉಪಟಳ ಹೆಚ್ಚಾಗಿ, ಗ್ರಾಮಸ್ಥರು ಆತಂಕದಲ್ಲಿ ಬದುಕುವಂತಾಗಿದೆ. ಚಿರತೆ ಸೆರೆ ಹಿಡಿಯುವಂತೆ‌ ಗ್ರಾಮಸ್ಥರು ಹಲವು ಬಾರಿ ಒತ್ತಾಯಿಸಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದರೂ ಇಲಾಖೆಯು ಚಿರತೆ ಸೆರೆ ಹಿಡಿಯಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ:ಆಂಧ್ರದಿಂದ ಬಂದ ರಾಗಿ ಕಟಾವು ಯಂತ್ರ.. ಗಂಟೆಗೆ 3350ರೂ. ದರ ನಿಗದಿ ಮಾಡಿದ ಜಿಲ್ಲಾಧಿಕಾರಿ

ABOUT THE AUTHOR

...view details