ಕರ್ನಾಟಕ

karnataka

ETV Bharat / state

ಆನೇಕಲ್​ ಬಳಿಯ ಸರ್ಕಾರಿ ಕಟ್ಟಡದಲ್ಲಿ ಕೋವಿಡ್ ಕೇರ್ ಸೆಂಟರ್ : ಸಂಸದ ನಾರಾಯಣ ಸ್ವಾಮಿ - covid Care Center at Government Building near Tindulu, Anekal

ಸರ್ಕಾರಿ ಜಾಗದ ಬಸವೇಶ್ವರ ಟ್ರಸ್ಟ್ ವತಿಯಿಂದ ನಿರ್ಮಿಸಿದ ಕಟ್ಟಡವನ್ನು ಆನೇಕಲ್​ ತಾಲೂಕಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮಾರ್ಪಡಿಸಿ ಜನತೆಗೆ ಸೇವೆ ಒದಗಿಸಲಾಗುವುದು..

MP Narayana Swamy
ಸಂಸದ ನಾರಾಯಣ ಸ್ವಾಮಿ

By

Published : May 9, 2021, 10:56 PM IST

ಆನೇಕಲ್ :ಸರ್ಜಾಪುರ ಹೋಬಳಿ ಮುಗಳೂರು ಗ್ರಾಮ ಪಂಚಾಯತ್‌ನ ತಿಂಡ್ಲು ಗ್ರಾಮದ ಬಳಿ ಸರ್ಕಾರಿ ಜಾಗದಲ್ಲಿ ನಿರ್ಮಿಸಿದ ಬೃಹತ್ ಕಟ್ಟಡದಲ್ಲಿ 150 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ತಾತ್ಕಾಲಿಕವಾಗಿ ತೆರೆಯಲಾಗುವುದು ಎಂದು ಸಂಸದ ಡಾ ಎ ನಾರಾಯಣಸ್ವಾಮಿ ಹೇಳಿದ್ದಾರೆ.

ಸಂಸದ ನಾರಾಯಣ ಸ್ವಾಮಿ

ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಜೊತೆ ತಿಂಡ್ಲುವಿನ ಸರ್ಕಾರಿ ಕಟ್ಟಡವನ್ನು ವೀಕ್ಷಿಸಿ ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಸೂಚಿಸಿದರು.

ಇದಕ್ಕಾಗಿ ನಾರಾಯಣ ಹೆಲ್ತ್ ಸಿಟಿ, ಜಿಗಣಿಯ ಸನ್ಸೆರಾ, ಬಯೋಕಾನ್ ಮತ್ತು ಆಕ್ಸ್‌ಫರ್ಡ್ ಆಸ್ಪತ್ರೆಗಳ ಸಹಭಾಗಿತ್ವ ಹಾಗೂ ಸಿಎಸ್ಆರ್ ನಿಧಿಯನ್ನ ಉಪಯೋಗಿಸಲಾಗುವುದು ಎಂದು ಭರವಸೆ ನೀಡಿದರು.‌

ಸರ್ಕಾರಿ ಜಾಗದ ಬಸವೇಶ್ವರ ಟ್ರಸ್ಟ್ ವತಿಯಿಂದ ನಿರ್ಮಿಸಿದ ಕಟ್ಟಡವನ್ನು ಆನೇಕಲ್​ ತಾಲೂಕಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮಾರ್ಪಡಿಸಿ ಜನತೆಗೆ ಸೇವೆ ಒದಗಿಸಲಾಗುವುದು ಎಂದರು.

ABOUT THE AUTHOR

...view details