ಕರ್ನಾಟಕ

karnataka

By

Published : Dec 17, 2021, 12:14 PM IST

ETV Bharat / state

ಗಡಿ ಶಾಲೆಗಳಲ್ಲಿ‌ ಸದ್ದಿಲ್ಲದೆ ದಾಖಲಾದ ಕೊರೊನಾ ಸೋಂಕು

ಶಾಲಾ ವಿದ್ಯಾರ್ಥಿಗಳ ಸಂಪರ್ಕಿತರ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ನಿರತರಾಗಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಸರಸ್ವತಿ ವಿದ್ಯಾನಿಕೇತನ ಶಾಲೆಯ ಪೋಷಕರು ಆತಂಕ ಪಡುವಂತಾಗಿದೆ..

Corona spread in border schools, Corona spread in Anekal schools, Corona found in school student, ಆನೇಕಲ್​ನ ಶಾಲೆಗಳಲ್ಲಿ ಹರಡಿದ ಕೊರೊನಾ, ಗಡಿಭಾಗದ ಶಾಲೆಗಳಲ್ಲಿ ಹರಡಿದ ಕೊರೊನಾ, ಶಾಲಾ ವಿದ್ಯಾರ್ಥಿಗಳಲ್ಲಿ ಕೊರೊನಾ ಪತ್ತೆ,
ಗಡಿ ಶಾಲೆಗಳಲ್ಲಿ‌ ಸದ್ದಿಲ್ಲದೆ ದಾಖಲಾದ ಕೊರೊನಾ ಸೋಂಕು

ಆನೇಕಲ್ : ಕರ್ನಾಟಕ-ತಮಿಳುನಾಡು ಗಡಿ ಶಾಲೆಗಳೆರಡರ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೊರೊನಾ ಆತಂಕ ಮತ್ತೆ ಎದುರಾಗಿದೆ.

ಆನೇಕಲ್ ತಾಲೂಕಿನ ದೊಮ್ಮಸಂದ್ರದ ಸರಸ್ವತಿ ವಿದ್ಯಾನಿಕೇತನ ಶಾಲೆಯಲ್ಲಿ ಐದು ವಿದ್ಯಾರ್ಥಿಗಳಲ್ಲಿ ಕೊರೊನಾ ಪರೀಕ್ಷೆ ವೇಳೆ ಪಾಸಿಟಿವ್‌ ಎಂದು ದೃಢಪಟ್ಟದೆ. ಇತ್ತ ಹಾರಗದ್ದೆ ಸಮೀಪದ ಸರ್ಕಾರಿ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿದೆ.

ಶಾಲಾ ವಿದ್ಯಾರ್ಥಿಗಳ ಸಂಪರ್ಕಿತರ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ನಿರತರಾಗಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಸರಸ್ವತಿ ವಿದ್ಯಾನಿಕೇತನ ಶಾಲೆಯ ಪೋಷಕರು ಆತಂಕ ಪಡುವಂತಾಗಿದೆ.

ABOUT THE AUTHOR

...view details