ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಸೊಂಕು ಪತ್ತೆಯಾದ ಹಿನ್ನೆಲೆ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯಲ್ಲಿದ್ದರು ಮಾಂಸದ ಅಂಗಡಿಗಳು ತೆರೆದಿವೆ.
ಮಾಂಸದ ಅಂಗಡಿಗಳಿಗೆ ತಟ್ಟದ ಕರ್ಫ್ಯೂ ಎಫೆಕ್ಟ್: ವೈದ್ಯಕೀಯ ಶಿಕ್ಷಣ ಸಚಿವರ ಜಿಲ್ಲೆ ಜನರಿಗೆ ಮಾಂಸದ್ದೇ ಚಿಂತೆ - ಕೊರೊನಾ ಅಪ್ಡೇಟ್
ದೇಶಾದ್ಯಂತ ಹೆಚ್ಚುತ್ತಿರುವ ಕೊರೊನಾ ಭೀತಿ ಮಧ್ಯೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್ಕಾರದ ಆದೇಶ ಗಾಳಿಗೆ ತೂರಿ ಮಾಂಸದಂಗಡಿಗಳನ್ನು ತೆರೆಯಲಾಗಿದೆ.
![ಮಾಂಸದ ಅಂಗಡಿಗಳಿಗೆ ತಟ್ಟದ ಕರ್ಫ್ಯೂ ಎಫೆಕ್ಟ್: ವೈದ್ಯಕೀಯ ಶಿಕ್ಷಣ ಸಚಿವರ ಜಿಲ್ಲೆ ಜನರಿಗೆ ಮಾಂಸದ್ದೇ ಚಿಂತೆ Chicken shop open in Chikkaballapura](https://etvbharatimages.akamaized.net/etvbharat/prod-images/768-512-6500971-thumbnail-3x2-chicken.jpg)
ಮಾಂಸದ ಅಂಗಡಿಗಳಿಗೆ ತಟ್ಟದ ಕರ್ಫೂ ಭೀತಿ
ಮಾಂಸದ ಅಂಗಡಿಗಳಿಗೆ ತಟ್ಟದ ಕರ್ಫೂ ಭೀತಿ
ಜಿಲ್ಲೆಯ ಟಿಪ್ಪು ನಗರ, ಕೊಡದವಾಡಿ, ಗೋಪಸಂದ್ರ ಸೇರಿದಂತೆ ಹಲವೆಡೆ ಮಾಂಸದಂಗಡಿಗಳು ತೆರೆದಿದ್ದು, ಮಾಂಸಕ್ಕಾಗಿ ಜನತೆ ಕ್ಯೂ ನಿಂತಿದ್ದಾರೆ. ಕೊಡದವಾಡಿ ಗ್ರಾಮದ ರಸ್ತೆ ಪಕ್ಕದಲ್ಲೇ ಬೆಳಗ್ಗೆ 4 ರಿಂದ ಮಾಂಸದಂಗಡಿ ತೆರೆದಿವೆ.
ಈಗಾಗಲೇ ಜಿಲ್ಲೆಯ ಗೌರಿಬಿದನೂರು, ಶಿಡ್ಲಘಟ್ಟ, ಬಾಗೆಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿಯಲ್ಲಿ ಸಾರ್ವಜನಿಕರು ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸುತ್ತಿದ್ದಾರೆ. ಆದರೆ ಇತ್ತ ಮಾಂಸದಂಗಡಿಗಳನ್ನು ತೆರೆದು ಸರ್ಕಾರದ ಆದೇಶವನ್ನು ಉಂಲಘಿಸಿದ್ದಾರೆ.
Last Updated : Mar 22, 2020, 12:16 PM IST