ಬೆಂಗಳೂರು:ಅನರ್ಹ ಶಾಸಕರ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದ ಹಿನ್ನಲೆ ಪೊಲೀಸ್ ಇಲಾಖೆ ಪುಲ್ ಅಲರ್ಟ್ ಆಗಿದ್ದಾರೆ.
ಉಪಚುನಾವಣೆಗೆ ಬಿರುಸುಗೊಂಡ ಪ್ರಕ್ರಿಯೆ: ಚೆಕ್ ಪೋಸ್ಟ್ ಗಳ ನಿರ್ಮಾಣ, ವಾಹನಗಳ ತಪಾಸಣೆ
ಚುನಾವಣಾ ಆಯೋಗ, ಉಪಚುನಾವಣೆ ಘೋಷಣೆ ಮಾಡಿದ್ದು, ಆಯಾ ಕ್ಷೇತ್ರಗಳಲ್ಲಿ ಪೊಲೀಸ್ ಇಲಾಖೆ ಈಗಾಗಲೇ ಚೆಕ್ ಪೋಸ್ಟ್ಗಳ ನಿರ್ಮಾಣ ಮಾಡಿ ವಾಹನಗಳ ತಪಾಸಣೆ ನಡೆಸುತ್ತಿದೆ.
ಬೆಂಗಳೂರು ಗ್ರಾಮಾಂತರ ಹೊಸಕೋಟೆ ವಿಧಾನಸಭಾ ಕ್ಷೇತ್ರ ಈ ಭಾರಿ ಪ್ರತಿಷ್ಟೆಯ ಕಣವಾಗಿದ್ದು, ಮತದಾರರನ್ನ ಸೆಳೆಯಲು ಹಣದ ಹೊಳೆಯೇ ಹರಿಯುವ ಸಾಧ್ಯತೆ ಇದೆ. ಹೀಗಾಗಿ ಇಂದಿನಿಂದಲೇ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಇಲಾಖೆ, ಚುನಾವಣಾ ಅಧಿಕಾರಿಗಳ ಆದೇಶದಂತೆ ಚೆಕ್ ಪೋಸ್ಟ್ ಗಳನ್ನ ನಿರ್ಮಿಸಿದ್ದಾರೆ.
ಹೊಸಕೋಟೆ ಕಡೆ ಬರುವ ಮತ್ತು ಹೋಗುವ ವಾಹನಗಳನ್ನ ಪೊಲೀಸರು ತೀವ್ರ ತಪಾಸಣೆಗೆ ಒಳಪಡಿಸುತ್ತಿದ್ದು ಕ್ಷೇತ್ರದಾಧ್ಯಂತ ಹದ್ದಿನ ಕಣ್ಣಿಡಲಾಗಿದೆ. ಜತೆಗೆ ಕ್ಷೇತ್ರದಲ್ಲಿ ಉಪಚುನಾವಣೆ ಪ್ರಕ್ರಿಯೆಗಳು ಬರದಿಂದ ಸಾಗಿದ್ದು, ಎಲ್ಲಾ ಪಕ್ಷಗಳ ಮುಖಂಡರ ಚಿತ್ತ ಬುಧವಾರ ನಡೆಯುವ ಸುಪ್ರಿಂ ಕೋರ್ಟ್ ನ ವಿಚಾರಣೆಯತ್ತ ನೆಟ್ಟಿದೆ.