ಕರ್ನಾಟಕ

karnataka

By

Published : Jun 21, 2019, 8:38 PM IST

ETV Bharat / state

ಮೂಲಭೂತ ಸೌಲಭ್ಯಗಳಿಗೆ ಆಗ್ರಹಿಸಿ ಪುರಸಭೆ ಮುಂದೆ ಬಿಎಸ್​ಪಿ ಪ್ರತಿಭಟನೆ

ಬೆಂಗಳೂರು ಗ್ರಾಮಾಂತರಕ್ಕೆ ಸೇರುವ ವಿಜಯಪುರ ಪುರಸಭೆ ಜನರಿಗೆ ಮೂಲಭೂತ ಸೌಲಭ್ಯಗಳು ಹಾಗೂ ಪುರಸಭೆಯ ಅಭಿವೃದ್ಧಿ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ, ಬಿಎಸ್​ಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ನಿರ್ಲಕ್ಷ್ಯ ಹೀಗೆ ಮುಂದುವರೆದ್ರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ರಾವನಿಸಿದರು.

ಬೆಂಗಳೂರು ಗ್ರಾಮಾಂತರ

ಬೆಂಗಳೂರು: ದೇವನಹಳ್ಳಿ ತಾಲೂಕಿನ ವಿಜಯಪುರ ಪುರಸಭೆಯ ಅಧಿಕಾರಿಗಳು ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದ್ದು, ಕೆಲವರು ಭ್ರಷ್ಟಾಚಾರ ನಡೆಸಿ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಎಸ್​ಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ವಿಜಯಪುರ ಪುರಸಭೆ ವ್ಯಾಪ್ತಿ, ದೇವನಹಳ್ಳಿ ಪುರಸಭೆಗಿಂತ ದೊಡ್ಡದಾಗಿದ್ದು, ಜನಸಂಖ್ಯೆ, ಆರ್ಥಿಕತೆಯಲ್ಲೂ ಪುರಸಭೆಗೆ ಹೆಚ್ಚು ಆದಾಯ ಬರುತ್ತದೆ. ಆದ್ರೆ ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿಜಯಪುರ ಪುರಸಭೆ ಅಭಿವೃದ್ಧಿ ಕಾಣುವಲ್ಲಿ ವಿಫಲವಾಗಿದೆ. ಬಿಎಸ್​ಪಿ ನಾರಾಯಣಸ್ವಾಮಿ ಆರೋಪಿಸಿದರು.

ಪ್ರತಿಭಟನೆ ವೇಳೆ ಮಾತನಾಡಿದ ಅವರು, ವಿಜಯಪುರ ಪುರಸಭೆಯ ಪ್ರತಿಯೊಂದು ವಾರ್ಡ್​ಗಳಲ್ಲೂ ಅಭಿವೃದ್ಧಿ ಕುಂಠಿತವಾಗಿದೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ನೀರಿಗಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ರಸ್ತೆಗಳಲ್ಲೇ ದೊಡ್ಡ ದೊಡ್ಡ ಗುಂಡಿಗಳು ಬಿದ್ದು, ಜನರು ಓಡಾಡುವುದಕ್ಕೆ ತೊಂದರೆಯಾಗುತ್ತಿದೆ. ಜರಂಡಿಗಳಲ್ಲಿ ಲೋಡ್​ಗಟ್ಟಲೇ ಕಸದ ರಾಶಿ ತುಂಬಿಕೊಂಡಿದ್ದು, ಅದರ ವಾಸನೆಯಿಂದ ಜನರಿಗೆ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ ಎಂದು ದೂರಿದರು.

ಪುರಸಭೆಯ ಅಭಿವೃದ್ಧಿಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ಬಿಎಸ್​ಪಿ ಪ್ರತಿಭಟನೆ

ವಿಜಯಪುರ ಪುರಸಭೆಗೆ ಕೆಲಸ ಮಾಡಲು ಬರುವ ಅಧಿಕಾರಿಗಳು ಜನರ ಕಷ್ಟಗಳನ್ನು ಕೇಳದೆ ಕೇವಲ ದುಡ್ಡು ಮಾಡಲು ಬಂದಂತೆ ಕಾಣುತ್ತಿದೆ. ಒಂದು ವಾರದ ಕಾಲಾವಕಾಶವನ್ನು ಪುರಸಭೆಗೆ ನೀಡಿದ್ದು, ಅಷ್ಟರಲ್ಲಿ ಜನರಿಗೆ ಬೇಕಾದ‌ ಮೂಲಭೂತ ಸೌಕರ್ಯಗಳನ್ನು ಒದಗಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ರು.

ಪುರಸಭೆಯ ಮುಖ್ಯಧಿಕಾರಿ ನಾಗರಾಜ್, ಪ್ರತಿಭಟನಕಾರರಿಂದ ಮನವಿ ಪತ್ರ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಈಗಾಗಲೇ ನೀರಿನ ಸಮಸ್ಯೆ ಬಗೆಹರಿಸಿದ್ದೇವೆ, ಚರಂಡಿಗಳ ಸ್ವಚ್ಛತೆಗೆ ಕ್ರಮ‌ ಕೈಗೊಳ್ಳಲಾಗಿದೆ. ಬೀದಿ ದೀಪಗಳ ಟೆಂಡರ್ ಮುಕ್ತಾಯಗೊಂಡಿದ್ದು, ಹೊಸ ಟೆಂಡರ್ ಕರೆಯಲಾಗಿದೆ. ‌ಸದ್ಯದಲ್ಲೇ ಬೀದಿ ದೀಪಗಳ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ. ಇನ್ನೇನಾದರು ಸಮಸ್ಯೆ ಇದ್ದಲ್ಲಿ ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ರು.

For All Latest Updates

TAGGED:

ABOUT THE AUTHOR

...view details