ಕರ್ನಾಟಕ

karnataka

ETV Bharat / state

ಅನೈತಿಕ ಸಂಬಂಧದ ವಿಚಾರಕ್ಕೆ ಯುವಕನ ಬರ್ಬರ ಕೊಲೆ.. ಮನೆಗೆ ಆಧಾರವಾಗಿದ್ದ ವ್ಯಕ್ತಿ ನಡುಬೀದಿಯಲ್ಲಿ ಹೆಣವಾದ

ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು, ಕಾರು ಸಮೇತ ಹಿಡಿದು ಠಾಣೆಗೆ ಕರೆತಂದಿದ್ದಾರೆ.

By

Published : May 25, 2023, 5:26 PM IST

Brutal murder of a young man for having an immoral relationship
ಅನೈತಿಕ ಸಂಬಂಧದ ವಿಚಾರಕ್ಕೆ ಯುವಕನ ಬರ್ಬರ ಕೊಲೆ

ಅನೈತಿಕ ಸಂಬಂಧದ ವಿಚಾರಕ್ಕೆ ಯುವಕನ ಬರ್ಬರ ಕೊಲೆ

ದೇವನಹಳ್ಳಿ: ಆ ಕುಟುಂಬಕ್ಕೆ ತಂದೆ ಇಲ್ಲ, ತಾಯಿಯೂ ಇಲ್ಲ. ಮನೆಯ ಸದಸ್ಯರನ್ನು ಆತನೇ ದುಡಿದು ಬದುಕು ಸಾಗಿಸಬೇಕಾದ ಸಂದಿಗ್ಧ ಪರಿಸ್ಥಿತಿ. ಈ ಮಧ್ಯೆ ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿ ಯಾವುದೋ ಸೆಳೆತಕ್ಕೆ ಒಳಗಾಗಿ ಬರ್ಬರವಾಗಿ ಕೊಲೆಗೀಡಾಗಿದ್ದಾನೆ. ಇತ್ತ ಕಣ್ಣೆದುರೇ ತಮ್ಮನ ಸಾವು ಕಂಡಿರುವ ಅಕ್ಕನಿಗೆ ದಿಕ್ಕು ತೋಚದಂತಾಗಿದೆ. ತನ್ನ ತಮ್ಮನನ್ನು ಕೊಂದಿರುವ ಆರೋಪಿಗಳಿಗೆ ಸರಿಯಾದ ಶಿಕ್ಷೆ ಆಗಬೇಕು. ಅವರು ಜೀವನಪರ್ಯಂತ ಜೈಲಿನಲ್ಲಿದ್ದು ಅಲ್ಲೇ ಸಾಯಬೇಕು ಅಂತಾ ಮೃತನ ಅಕ್ಕ ಕೊಲೆ ಆರೋಪಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಜೀವಕ್ಕೆ ಎರವಾದ ಅಕ್ರಮ ಸಂಬಂಧ.. ಹೌದು, ಅನೈತಿಕ ಸಂಬಂಧದ ವಿಚಾರಕ್ಕೆ ಯುವಕನೋರ್ವನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಿಂಗ್ರಹಳ್ಳಿ ಗ್ರಾಮದಲ್ಲಿ‌ ನಡೆದಿದೆ. ಗ್ರಾಮದ ಪ್ರದೀಪ್ (27) ಕೊಲೆಗೀಡಾಗಿರುವ ಯುವಕ. ಅಂದ ಹಾಗೆ, ಇದೇ ಊರಿನ ವೆಂಕಟೇಶ್ ಎಂಬಾತನ ಪತ್ನಿ ಜೊತೆ ಈ ಪ್ರದೀಪ್​ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎಂಬ ಆರೋಪ ಕೇಳಿ‌ಬಂದಿದೆ.

ಮದ್ಯಪಾನ ಮಾಡಿಸಿ ಸಂಚು ರೂಪಿಸಿದರು.. ಇದೇ ವಿಚಾರವಾಗಿ‌ ಬುಧವಾರ ರಾತ್ರಿ ನಿನ್ನ ಬಳಿ‌ ಮಾತನಾಡಬೇಕು ಬಾ ಎಂದು ಆ ಮಹಿಳೆಯ ಪತಿ ವೆಂಕಟೇಶನು ಪ್ರದೀಪನನ್ನು ಕರೆಸಿಕೊಂಡಿದ್ದನಂತೆ. ಗ್ರಾಮದ ಹೊರವಲಯದ ಲೇಔಟ್ ಒಂದರಲ್ಲಿ ವೆಂಕಟೇಶ ಹಾಗೂ ನಾಗೇಶ ಎಂಬುವವರು ಪ್ರದೀಪನಿಗೆ ಚೆನ್ನಾಗಿ ಮದ್ಯಪಾನ ಮಾಡಿಸಿ ಕೈ ಕಾಲುಗಳನ್ನು ಕಟ್ಟಿ ಕೊಚ್ಚಿ ಕೊಲೆ ಮಾಡಿದ್ದಾರೆ. ವೆಂಕಟೇಶ್ ಮತ್ತು ಕೋಳಿ ನಾಗೇಶ್ ಎಂಬುವರು ಮನಬಂದಂತೆ ಕೊಚ್ಚಿ ಎಸ್ಕೇಪ್ ಆಗಿದ್ದಾರೆ. ಕೊಚ್ಚಿದ ನಂತರ ಒಂದು ಕಿಲೋ ಮೀಟರ್​ವರೆಗೆ ಪ್ರದೀಪ್​ ಓಡೋಡಿ ಬಂದಿದ್ದಾನೆ. ಆದರೂ ಬಿಡದೆ ಅಟ್ಟಾಡಿಸಿಕೊಂಡು ಬಂದು ಕೊಲೆ ಮಾಡಿದ್ದಾರೆ ಪ್ರದೀಪ್​ನ ಅಕ್ಕ ಪ್ರೇಮ ಕಣ್ಣೀರು ಹಾಕಿದ್ದಾರೆ.

ಗ್ರಾಮದಲ್ಲಿ ಆತಂಕದ ವಾತಾವರಣ.. ಈ ಕೊಲೆ ಕಂಡು ಮಧ್ಯರಾತ್ರಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕೆ ವಿಶ್ವನಾಥಪುರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಾಗಿದೆ. ಕೊಲೆ ಮಾಡಿ‌ ಎಸ್ಕೇಪ್ ಆಗಿದ್ದವರನ್ನು ಪೊಲೀಸರು ಕಾರು ಸಮೇತ ಹಿಡಿದು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಈ‌ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಟ್ರ್ಯಾಕ್ಟರ್​ ಬೈಕ್​ ನಡುವೆ ಅಪಘಾತ- ಸಾವು: ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಪಿಡಿಓ ಮೃತಪಟ್ಟ ಘಟನೆ ನಿನ್ನೆ ತಡರಾತ್ರಿ ನಡೆದಿತ್ತು. ‌ಹಾವೇರಿ ಜಿಲ್ಲೆಯ ಸವಣೂರಿನ ಶಿರಬಡಗಿ ಗ್ರಾಮ ಪಂಚಾಯತಿ ಪಿಡಿಓ ಸಾವನ್ನಪ್ಪಿದ್ದಾರೆ. ಮೂಲತಃ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಣ್ಣೂರಿನವರಾದ ಶಿವಾನಂದ ಬಸಪ್ಪ ಹಡಪದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಯರಿಕೊಪ್ಪ ಕ್ರಾಸ ಬಳಿ ತಡರಾತ್ರಿ ಅಪಘಾತ ಸಂಭವಿಸಿದೆ. ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಮೃತ ದೇಹ ರವಾನೆ ಮಾಡಲಾಗಿದೆ.

ಇದನ್ನೂ ಓದಿ:ತುಮಕೂರು: ನಿಂತಿದ್ದ ಬಸ್ ಗೆ ಟಿಟಿ ಡಿಕ್ಕಿ: ಇಬ್ಬರು ಸಾವು

ABOUT THE AUTHOR

...view details