ಕರ್ನಾಟಕ

karnataka

ETV Bharat / state

ಬೆಂಗಳೂರು ವಿಮಾನ ನಿಲ್ದಾಣ ಬಳಿ ಸ್ಫೋಟ; 6 ಜನರಿಗೆ ಗಾಯ - ಎರಡನೇ ಟರ್ಮಿನಲ್​

ಕೆಲಸ ಮಾಡುತ್ತಿದ್ದ ಅವಿನಾಶ, ಸಿರಾಜ್, ಪ್ರಶಾಂತ, ಗೌತಮ, ಅಜಯ್‌ ಕುಮಾರ್ ಹಾಗೂ ನಾಗೇಶ ರಾವ್ ಎಂಬ ಆರು ಕಾರ್ಮಿಕರಿಗೆ ಬೆಂಕಿ ತಗುಲಿದೆ. ಸುಟ್ಟ ಗಾಯಗಳಿಗೆ ತುತ್ತಾಗಿದ್ದ ಈ 6 ಕಾರ್ಮಿಕರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

blast  bangalore blast  kempegowda airport  blast near kempegowda airport  ಬೆಂಗಳೂರು ವಿಮಾನ ನಿಲ್ದಾಣ ಬಳಿ ಸ್ಫೋಟ  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ  ರಾಸಾಯನಿಕ ಸ್ಫೋಟ  ಎರಡನೇ ಟರ್ಮಿನಲ್​ 6 ಕಾರ್ಮಿಕರಿಗೆ ಗಾಯ
ಬೆಂಗಳೂರು ವಿಮಾನ ನಿಲ್ದಾಣ ಬಳಿ ಸ್ಫೋಟ; 6 ಜನರಿಗೆ ಗಾಯ

By

Published : Jun 6, 2021, 11:24 PM IST

Updated : Jun 7, 2021, 7:37 AM IST

ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್​ಗಾಗಿ ರಸ್ತೆ ವಿಸ್ತರಣೆಯ ಕಾಮಗಾರಿ ಸ್ಥಳದಲ್ಲಿ ಸಂಭವಿಸಿದ ಸ್ಫೋಟದಲ್ಲಿ 6 ಕಾರ್ಮಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೆಂಗಳೂರು ವಿಮಾನ ನಿಲ್ದಾಣ ಬಳಿ ಸ್ಫೋಟ; 6 ಜನರಿಗೆ ಗಾಯ

ದೇವನಹಳ್ಳಿ ಬಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಎರಡನೇ ಟರ್ಮಿನಲ್​ಗಾಗಿ ರಸ್ತೆ ವಿಸ್ತರಣೆ ಮತ್ತು ರಸ್ತೆಗೆ ಸಂಚಾರ ಸಂಕೇತಗಳ ಬಿಳಿ ಬಣ್ಣದ ಪಟ್ಟಿ ಬಳಿಯುವ ಕೆಲಸ ನಡೆದಿತ್ತು. ರಸ್ತೆಗೆ ಬಳಿಯಬೇಕಾದ ಬಣ್ಣಗಳನ್ನು ಕೆಲ ರಾಸಾಯನಿಕಗಳನ್ನು ಬೆರೆಸಿ ಸಿಲಿಂಡರ್ ಮೂಲಕ ಕಾರ್ಮಿಕರು ಕಾಯಿಸುತ್ತಿದ್ದರು. ಈ ವೇಳೆ ಸಿಲಿಂಡರ್ ಸ್ಪೋಟಗೊಂಡಿದೆ.

ಸ್ಟೋಟದಿಂದ ಬಣ್ಣಗಳ ದಾಸ್ತಾನಿಗೂ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಈ ಸಮಯದಲ್ಲಿ ಕೆಲಸ ಮಾಡುತ್ತಿದ್ದ ಅವಿನಾಶ, ಸಿರಾಜ್, ಪ್ರಶಾಂತ, ಗೌತಮ, ಅಜಯ ಕುಮಾರ ಹಾಗೂ ನಾಗೇಶ ರಾವ್ ಎಂಬ ಆರು ಕಾರ್ಮಿಕರಿಗೆ ಬೆಂಕಿ ತಗುಲಿದೆ. ಸುಟ್ಟ ಗಾಯಗಳಿಗೆ ತುತ್ತಾಗಿದ್ದ ಈ 6 ಕಾರ್ಮಿಕರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ದಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Last Updated : Jun 7, 2021, 7:37 AM IST

ABOUT THE AUTHOR

...view details