ಕರ್ನಾಟಕ

karnataka

By

Published : Dec 6, 2022, 1:28 PM IST

Updated : Dec 6, 2022, 1:47 PM IST

ETV Bharat / state

ವೃದ್ಧೆಯ ಸರಗಳ್ಳತನ ಮಾಡಿ ಆರೋಪಿಗಳು ಪರಾರಿ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ

ವೃದ್ಧೆ ವಿಜಯಮ್ಮ ಕುತ್ತಿಗೆಗೆ ಕೈ ಹಾಕಿ ಸರ ಕಿತ್ತುಕೊಂಡು ಕ್ಷಣಾರ್ಧದಲ್ಲೇ ಆರೋಪಿಗಳು ಪರಾರಿಯಾಗಿದ್ದಾರೆ. ದೇವನಹಳ್ಳಿಯಲ್ಲಿ ಈ ಘಟನೆ ನಡೆದಿದೆ.

Etv Bharataccused-ran-away-after-robbing-old-woman-chain
Etv Bharatವೃದ್ಧೆಯ ಸರಗಳ್ಳತನ ಮಾಡಿ ಆರೋಪಿಗಳು ಪರಾರಿ... ದೃಶ್ಯ ಸಿಸಿಟಿವಿಯಲ್ಲಿ ಸೆರೆ

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಮನೆ ಮುಂದೆ ನಿಂತಿದ್ದ ವೃದ್ದೆಯ ಸರಗಳ್ಳತನ ಮಾಡಿ ಆರೋಪಿಗಳು ಪರಾರಿಯಾಗಿರುವ ಘಟನೆ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ.

ವೃದ್ಧೆಯ ಸರಗಳ್ಳತನ ಮಾಡಿ ಆರೋಪಿಗಳು ಪರಾರಿ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಎದುರು ಮನೆ ಮುಂದೆ ಬೈಕ್ ನಿಲ್ಲಿಸಿದ ಇಬ್ಬರು ಯಾರನ್ನೋ ಕೇಳುವ ನೆಪದಲ್ಲಿ ನಡೆದುಕೊಂಡು ಬಂದು ಮನೆಯ ಹೊರಗಿದ್ದ ವೃದ್ಧೆ ವಿಜಯಮ್ಮ ಕುತ್ತಿಗೆಗೆ ಕೈ ಹಾಕಿ ಸರ ಕಿತ್ತುಕೊಂಡು ಕ್ಷಣಾರ್ಧದಲ್ಲೇ ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುಮಾರು 50 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗುವ ವೇಳೆ, 20 ಗ್ರಾಂನಷ್ಟು ಸರ ತುಂಡಾಗಿ ಬಿದ್ದಿದೆ.

ಇತ್ತೀಚೆಗೆ ವಿಜಯಪುರ ಪಟ್ಟಣದಲ್ಲಿ ಕಳ್ಳತನ ಸುಲಿಗೆ ಪ್ರಕರಣಗಳು ಹೆಚ್ಚಾಗಿದ್ದು, ಪೊಲೀಸರ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವಿಜಯಪುರ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ಬೀರುವಿನಲ್ಲಿದ್ದ ಚಿನ್ನ ದೋಚಿ ಕಳ್ಳರ ಕಾರುಬಾರು: ತಡವಾಗಿ ಬೆಳಕಿಗೆ ಬಂತು ಪ್ರಕರಣ

Last Updated : Dec 6, 2022, 1:47 PM IST

ABOUT THE AUTHOR

...view details