ಕರ್ನಾಟಕ

karnataka

ETV Bharat / state

ದೇವನಹಳ್ಳಿಯಲ್ಲಿ ಟೋಲ್​ ಸುಂಕ ಕೇಳಿದ್ದಕ್ಕೆ ಮಚ್ಚು ತೋರಿಸಿದ ರೈತ: ಸಿಬ್ಬಂದಿ ಆರೋಪ - farmer threaten

ನೀನು ರೈತ ಎನ್ನುವುದಕ್ಕೆ ಸಾಕ್ಷಿ ಏನೆಂದು ಟೋಲ್ ಸಿಬ್ಬಂದಿ ಕೇಳಿದಾಗ, ಪ್ರತಿಯಾಗಿ ರೈತ ತನ್ನ ಹೊಲದಲ್ಲಿ ಬೇಲಿ ಕಡಿಯಲು ಹೋಗುತ್ತಿರುವುದಾಗಿ ಮಚ್ಚು ತೋರಿಸಿದ್ದಾನಂತೆ. ರೈತ ತಮಗೆ ಮಚ್ಚು ತೋರಿಸಿ ಬೆದರಿಕೆ ಹಾಕಿದ್ದಾನೆಂದು ಟೋಲ್​ ಸಿಬ್ಬಂದಿ ಆರೋಪಿಸಿದ್ದಾರೆ.

Toll staff and farmers
Toll staff and farmers

By

Published : Jun 24, 2021, 3:13 PM IST

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಟೋಲ್ ಸುಂಕ ಕೇಳಿದ್ದಕ್ಕೆ ಮಚ್ಚು ತೋರಿಸಿ ಬೆದರಿಕೆ ಹಾಕಿದ್ದಾನೆಂದು ಟೋಲ್ ಸಿಬ್ಬಂದಿ ರೈತನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಆದರೆ ರೈತ ಹೊಲದಲ್ಲಿ ಬೇಲಿ ಕತ್ತರಿಸಲು ಕಾರಿನಲ್ಲಿ ಮಚ್ಚು ತೆಗೆದುಕೊಂಡು ಹೋಗುತ್ತಿದ್ದಾಗ, ಟೋಲ್ ಸುಂಕ ಕಟ್ಟುವ ವಿಚಾರಕ್ಕೆ ಸಿಬ್ಬಂದಿ ಮತ್ತು ರೈತನ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ರೈತ ಮಚ್ಚು ತೋರಿಸಿದ್ದಾನೆಂಬ ಆರೋಪ ಕೇಳಿ ಬಂದಿದೆ.

ಟೋಲ್​ ಸುಂಕ ಕೇಳಿದ್ದಕ್ಕೆ ಮಚ್ಚು ತೋರಿಸಿದನಂತೆ ರೈತ?
ದೇವನಹಳ್ಳಿ ಏರ್​ಪೋರ್ಟ್​ ರಸ್ತೆಯ ಟೋಲ್ ಬಳಿ ರೈತನೋರ್ವ ಕಾರಿನಲ್ಲಿ ಹೋಗುವಾಗ ಟೋಲ್ ಸಿಬ್ಬಂದಿ ಸುಂಕ ಕಟ್ಟುವಂತೆ ಹೇಳಿದ್ದಾರೆ. ರೈತ ನಾನು ಸುಂಕ ಕಟ್ಟಲ್ಲ ಅಂದಾಗ ಸಿಬ್ಬಂದಿ ಮತ್ತು ರೈತನ ನಡುವೆ ವಾಗ್ವಾದ ನಡೆದಿದೆ. ನಾನು ಸ್ಥಳೀಯ ರೈತ, ಟೋಲ್ ಸುಂಕ ಕಟ್ಟುವುದಿಲ್ಲವೆಂದು ಹೇಳಿದ್ದಾನೆ. ನೀನು ರೈತ ಎನ್ನುವುದಕ್ಕೆ ಸಾಕ್ಷಿ ಏನೆಂದು ಟೋಲ್ ಸಿಬ್ಬಂದಿ ಕೇಳಿದಾಗ, ಪ್ರತಿಯಾಗಿ ರೈತ ತನ್ನ ಹೊಲದಲ್ಲಿ ಬೇಲಿ ಕಡಿಯಲು ಹೋಗುತ್ತಿರುವುದಾಗಿ ಮಚ್ಚು ತೋರಿಸಿದ್ದಾನಂತೆ. ಇದನ್ನೇ ನೆಪವಾಗಿರಿಸಿಕೊಂಡ ಟೋಲ್ ಸಿಬ್ಬಂದಿ, ರೈತ ಮಚ್ಚು ತೋರಿಸಿ ತಮೆಗೆ ಬೆದರಿಕೆ ಹಾಕಿದ್ದಾನೆಂದು ಆರೋಪಿಸಿದ್ದಾರೆ.

ಇದನ್ನೂ ಓದಿ:ರೇಖಾ ಕದಿರೇಶ್ Murder Case: ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿ ತನಿಖೆ ಚುರುಕು

ಚಿಕ್ಕಜಾಲ ಪೊಲೀಸರು ರೈತನನ್ನ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ನಂತರ ಆತನನ್ನು ಬಿಟ್ಟು ಕಳಿಸಲಾಗಿದೆ. ಸ್ಥಳೀಯ ರೈತರಿಗೆ ಟೋಲ್ ಸುಂಕ ಕಟ್ಟಲು ವಿನಾಯಿತಿ ಇದೆ. ಹೀಗಿರುವಾಗ ಸಿಬ್ಬಂದಿ ರೈತರನ್ನು ಟೋಲ್​ ಕೇಳುವಂತಿಲ್ಲ, ಹಾಗೆಯೇ ರೈತ ಮಚ್ಚು ತೋರಿಸುವ ಪರಿಸ್ಥಿತಿ ಎದುರಾಗುವುದಿಲ್ಲ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.

ABOUT THE AUTHOR

...view details