ಕರ್ನಾಟಕ

karnataka

ದೇವನಹಳ್ಳಿಯಲ್ಲಿ ಯೋಗಪಟುಗಳಿಂದ ಯೋಗ ಪ್ರದರ್ಶನ

ಆರೋಗ್ಯವನ್ನ ಕಾಪಾಡಿಕೊಳ್ಳುವುದರ ಜತೆಗೆ ಪ್ರತಿನಿತ್ಯ ಯೋಗಾಭ್ಯಾಸ ಮನುಷ್ಯನ ಮಾನಸಿಕವಾಗಿ ಸದೃಢ ಮಾಡುತ್ತದೆ ಎಂದ ಶಾಸಕ ನಿಸರ್ಗ ನಾರಾಯಣಸ್ವಾಮಿ 5ನೇ ವಿಶ್ವ ಯೋಗ ದಿನಾಚಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನತೆಗೆ ಯೋಗದ ಕುರಿತು ಅರಿವು ಮೂಡಿಸಿದರು.

By

Published : Jun 21, 2019, 3:05 PM IST

Published : Jun 21, 2019, 3:05 PM IST

ETV Bharat / state

ದೇವನಹಳ್ಳಿಯಲ್ಲಿ ಯೋಗಪಟುಗಳಿಂದ ಯೋಗ ಪ್ರದರ್ಶನ

ದೇವನಹಳ್ಳಿಯಲ್ಲಿ ಯೋಗಪಟುಗಳಿಂದ ಯೋಗ ಪ್ರದರ್ಶನ

ಬೆಂಗಳೂರು:ಇಡೀ ದೇಶದಲ್ಲಿ ಇಂದು ಐದನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಣೆ ಮಾಡುತ್ತಿದ್ದಾರೆ. ಅಂತೆಯೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಜಿಲ್ಲಾಡಳಿತ ಹಾಗೂ ಆಯುಷ್ ಇಲಾಖೆಯಿಂದ ಯೋಗ ದಿನಾಚರಣೆಯನ್ನ ಆಯೋಜಿಸಲಾಗಿತ್ತು.

ದೇವನಹಳ್ಳಿಯಲ್ಲಿ ಯೋಗಪಟುಗಳಿಂದ ಯೋಗ ಪ್ರದರ್ಶನ

ಪಟ್ಟಣದ ಸರ್ಕಾರಿ ಕಾಲೇಜು ಆವರಣದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಸಂಜೀವಿನಿ ಯೋಗ ಸಂಸ್ಥೆಯ ನೂರಾರು ಯೋಗಪಟುಗಳು ತಮ್ಮ ಯೋಗ ಪ್ರದರ್ಶನವನ್ನ ಅನಾವರಣಗೊಳಿಸಿದ್ರು. ಇನ್ನು ಕಾರ್ಯಕ್ರಮವನ್ನ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಮ್ಮ ಹಾಗೂ ಸ್ಥಳೀಯ ಶಾಸಕ ನಿಸರ್ಗ ನಾರಾಯಣಸ್ವಾಮಿ ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಗಣ್ಯರು ಕೂಡ ಯೋಗದಲ್ಲಿ ಭಾಗವಹಿಸಿದ್ರು.

ಪಟ್ಟಣದಲ್ಲಿ ಮಹಿಳೆಯರು ಸೇರಿದಂತೆ ನೂರಾರು ಜನ ಭಾಗವಹಿಸಿ ಯೋಗಾಸನ ಮಾಡಿದರು. ಈ ವೇಳೆ ಪ್ರಮುಖವಾಗಿ ಯೋಗದ ಮಹತ್ವದ ಬಗ್ಗೆ ನೆರೆದಿದ್ದ ಜನರಿಗೆ ಅರಿವು ಮೂಡಿಸಿದ್ದಲ್ಲದೆ, ಸಾಮೂಹಿಕ ಸೂರ್ಯ ನಮಸ್ಕಾರ ಸೇರಿದಂತೆ ವಿವಿಧ ಯೋಗಸನಗಳನ್ನ ಮಾಡಿಸಲಾಯಿತು.

For All Latest Updates

TAGGED:

Devanahalli

ABOUT THE AUTHOR

...view details