ಕರ್ನಾಟಕ

karnataka

By

Published : Sep 14, 2020, 6:39 PM IST

Updated : Sep 14, 2020, 6:53 PM IST

ETV Bharat / state

ಮನೆಯ ಕಾಂಪೌಂಡ್​ನಲ್ಲಿ 29 ಕೆಜಿ ಗಾಂಜಾ ಬೆಳೆದಿದ್ದ ವ್ಯಕ್ತಿ: ವಶಕ್ಕೆ ಪಡೆದ ಪೊಲೀಸರು

ದೇವನಹಳ್ಳಿ ತಾಲೂಕಿನ ಬೆಟ್ಟಕೋಟೆಯ ನಿವಾಸಿ ಪಿ. ವೆಂಕಟಪ್ಪ ಎಂಬುವರು ತಮ್ಮ ಮನೆಯ ಕಾಂಪೌಂಡ್​ ಒಳಗೆ 29 ಕೆ.ಜಿ ಗಾಂಜಾ ಬೆಳೆದಿದ್ದರು. ಖಚಿತ ಮಾಹಿತಿ ಮೇರೆಗೆ ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ರಂಗಪ್ಪ ನೇತೃತ್ವದಲ್ಲಿ ಚನ್ನರಾಯಪಟ್ಟಣದ  ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಮನೆಯ ಕಾಂಪೌಂಡ್​ನಲ್ಲಿ 29 ಕೆಜಿ ಗಾಂಜಾ ಪತ್ತೆ
ಮನೆಯ ಕಾಂಪೌಂಡ್​ನಲ್ಲಿ 29 ಕೆಜಿ ಗಾಂಜಾ ಪತ್ತೆ

ದೇವನಹಳ್ಳಿ: ಮನೆಯ ಕಾಂಪೌಂಡ್​ನಲ್ಲಿ ಬೆಳೆದಿದ್ದ ಗಾಂಜಾ ಗಿಡವನ್ನು ಪತ್ತೆ ಮಾಡುವ ಮೂಲಕ ದೇವನಹಳ್ಳಿಯ ಚನ್ನರಾಯಪಟ್ಟಣದ ಪೊಲೀಸರು 29 ಕೆಜಿ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ.

ಮನೆಯ ಕಾಂಪೌಂಡ್​ನಲ್ಲಿ 29 ಕೆಜಿ ಗಾಂಜಾ ಬೆಳೆದಿದ್ದ ವ್ಯಕ್ತಿ

ಗಾಂಜಾ ವಿರುದ್ಧ ಸಮರ ಸಾರಿರುವ ಪೊಲೀಸರು ಮಾದಕ ವಸ್ತುಗಳನ್ನ ಪತ್ತೆ ಮಾಡುತ್ತಿದ್ದಾರೆ. ದೇವನಹಳ್ಳಿ ತಾಲೂಕಿನ ಬೆಟ್ಟಕೋಟೆಯ ನಿವಾಸಿ ಪಿ. ವೆಂಕಟಪ್ಪ (70) ತನ್ನ ಮನೆಯ ಕಾಂಪೌಂಡ್​​ನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ, ಇದರ ಖಚಿತ ಮಾಹಿತಿ ಮೇರೆಗೆ ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ರಂಗಪ್ಪ ನೇತೃತ್ವದಲ್ಲಿ ಚನ್ನರಾಯಪಟ್ಟಣದ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳೆ ವೇಳೆ ಅಕ್ರಮವಾಗಿ ಬೆಳೆದಿದ್ದ ಗಾಂಜಾವನ್ನು ಪತ್ತೆ ಮಾಡಿದ್ದಾರೆ. 29 ಕೆಜಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Sep 14, 2020, 6:53 PM IST

ABOUT THE AUTHOR

...view details