ಬಾಗಲಕೋಟೆ:ಮಡಿಕೇರಿಯ ಪೊನ್ನಂಪೇಟೆಯಲ್ಲಿ ಬಜರಂಗದಳದವರು ಕ್ಯಾಂಪ್ನಲ್ಲಿ 5 ಇಂಚಿನ ಮರದ ತ್ರಿಶೂಲ ದೀಕ್ಷೆ, ಏರ್ ಗನ್ ಸಹ ಬಳಕೆ ಮಾಡಿದ್ದಾರೆ. ಇದೇನು ಕಾನೂನು ಬಾಹಿರ ಅಲ್ಲ. ಯುವಕರಲ್ಲಿ ಧೈರ್ಯ- ಸ್ಥೈರ್ಯ ತುಂಬುವುದಕ್ಕಾಗಿ ಮಾಡಿದ್ದಾರೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಹೀಗೆ ಮಾಡುತ್ತಿರುವುದು ಹೊಸದೇನಲ್ಲ. ಈ ಹಿಂದೆ ಬಜರಂಗದಳ ಇದ್ದಾಗಲೂ ಮಾಡಿದ್ದೇವೆ. ಇದೇನು ಕಾನೂನು ಬಾಹಿರ, ದೇಶದ್ರೋಹ ಅಲ್ಲ. ಕಾನೂನು ಬದ್ಧವಾಗಿ ಯುವಕರಲ್ಲಿ ದೇಶಭಕ್ತಿ ತುಂಬುತ್ತಿದ್ದೇವೆ. ಮಿಲಿಟರಿ ಸೇರುವ ಯುವಕರಿಗೆ ಈ ರೀತಿಯ ತರಬೇತಿ ಕೊಟ್ಟರೆ ಸುಲಭವಾಗಿ ಆಯ್ಕೆ ಆಗ್ತಾರೆ ಎಂದು ಹೇಳುವ ಮೂಲಕ ಮುತಾಲಿಕ್ ಮಡಿಕೇರಿ ತ್ರಿಶೂಲ ದೀಕ್ಷೆಯನ್ನು ಬೆಂಬಲಿಸಿದರು.