ಕರ್ನಾಟಕ

karnataka

ETV Bharat / state

ಸಾಲ ಮನ್ನಾ ವಿಚಾರ: ಬಿಎಸ್​ವೈ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದ ನೇಕಾರರ ಸಂಘ - ನೇಕಾರರ ಸಾಲ ಮನ್ನಾ

ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಕೂಡಲೇ ಬಿ.ಎಸ್​.ಯಡಿಯೂರಪ್ಪ ನೇಕಾರರ 100 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿ ಘೋಷಣೆ ಮಾಡಿದ್ದಾರೆ.

ನೇಕಾರರ ಸಮಾಜದ ವತಿಯಿಂದ ಸಿಎಂಗೆ ಗೌರವ

By

Published : Jul 30, 2019, 11:08 PM IST

ಬಾಗಲಕೋಟೆ:ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನವೇ ರಾಜ್ಯದ ನೇಕಾರರ 100 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿ ಬಿಎಸ್​ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಬಿಎಸ್​ವೈ ಕಾರ್ಯ ಶ್ಲಾಘನೀಯ ಎಂದು ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಸಂತಸ ವ್ಯಕ್ತಪಡಿಸಿದ್ದಾರೆ.

ಇಂದು ಬೆಳ್ಳಗ್ಗೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸಿರುವ ಅವರು,ರಾಜ್ಯಾದ್ಯಂತ ನೇಕಾರರ ಸಾಲ 241 ಕೋಟಿ ರೂ.ಗಳಷ್ಟಿದ್ದು,100 ಕೋಟಿ ರೂ.ಗಳ ಬದಲಾಗಿ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಮನವಿ ಮಾಡಿದರು. ಇದರಿಂದ ನೇಕಾರರ ಬದುಕು ಮತ್ತಷ್ಟು ಸರಳವಾಗುವುದು ಎಂದು ತಿಳಿಸಿದರು.

ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ನೇಕಾರರ 100 ಕೋಟಿ ರೂ.ಗಳ ಸಾಲ ಮನ್ನಾ ಮಾಡಿದ್ದಕ್ಕೆ ತೇರದಾಳ ವಿಧಾನಸಭಾ ಕ್ಷೇತ್ರದಿಂದ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ನೇಕಾರ ಮುಖಂಡರು ಬಿ.ಎಸ್. ಯಡಿಯೂರಪ್ಪನವರನ್ನು ಸನ್ಮಾನಿಸಿದರು. ನೇಕಾರ ಮುಖಂಡರಾದ ಸುರೇಶ ಕೋಲಾರ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಭೀಮಶಿ ಮಗದುಮ್, ಜಿಲ್ಲಾ ಹೋರಾಟಗಾರ ಡಾ. ಪಂಡಿತ ಪಟ್ಟಣ, ಮಲ್ಲಿಕಾರ್ಜುನ ಬಾಣಕಾರ, ಸಂಗಯ್ಯ ಅಮ್ಮಣಗಿಮಠ, ರಾಜು ಅಂಬಲಿ, ಆನಂದ ಕಂಪು, ಲಕ್ಕಪ್ಪ ಪಾಟೀಲ ಮತ್ತಿತರರು ಇದ್ದರು.

ABOUT THE AUTHOR

...view details