ಬಾಗಲಕೋಟೆ: ಅಪರಿಚಿತ ವಾಹನವೊಂದು ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟು, ಹತ್ತಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಬಾದಾಮಿ ತಾಲೂಕಿನ ಹಳಗೇರಿ ಗ್ರಾಮದ ಸಮೀಪ ನಡೆದಿದೆ.
ಶಿವು ಗೋಸಾವಿ (4) ಹಾಗೂ ಗೋಪಾಲ ಗೋಸಾವಿ (35) ಮೃತ ದುರ್ದೈವಿಗಳು. ಇಬ್ಬರೂ ವಿಜಯಪುರದಿಂದ ರಾಮದುರ್ಗಕ್ಕೆ ತೆರಳುತ್ತಿದ್ದರು. ಈ ವೇಳೆ ಹಳಗೇರಿ ಬಳಿ ಹಿಂಬದಿಯಿಂದ ಬಂದ ವಾಹನ ಟಾಟಾ ಏಸ್ಗೆ ಗುದ್ದಿದೆ. ಪರಿಣಾಮ ಪಕ್ಕದಲ್ಲಿದ್ದ ಹೊಲಕ್ಕೆ ಟಾಟಾ ಏಸ್ ವಾಹನ ಬಿದ್ದಿದ್ದು, ಇಬ್ಬರು ಮೃತಪಟ್ಟಿದ್ದಾರೆ.