ಬಾಗಲಕೋಟೆ:ಆಸ್ಟ್ರೇಲಿಯಾ ಪ್ರಜೆ ಮೇಲಿನ ಹಲ್ಲೆಯ ಬಗ್ಗೆ ಎಲ್ಲಾ ಮಾಹಿತಿಯನ್ನು ಚೈನೈನಲ್ಲಿರುವ ರಾಯಭಾರಿ ಕಚೇರಿಗೆ ನೀಡಿ, ಅವರ ಸಂಬಂಧಿಕರಿಗೆ ವಿಷಯ ತಿಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲೋಕೇಶ ಜಗಲಸಾರ ತಿಳಿಸಿದ್ದಾರೆ.
ಅವರು ಬಾಗಲಕೋಟೆ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಕಳೆದ ವಾರದ ಹಿಂದೆ ಕೋಲ್ಹಾಪೂರದಲ್ಲಿ ಯೋಗ ವಿಕಾಸನ ಶಿಬಿರದಲ್ಲಿ ಭಾಗವಹಿಸಿದ್ದು, ಸದಾ ಏಕಾಂಗಿ ಆಗಿ ಸಂಚಾರ ಮಾಡುತ್ತಿದ್ದ ವಿಲಿಯಂ, ಬದಾಮಿಗೆ ಹೋಗುವಾಗ ಕೊಂಕಣಕೊಪ್ಪ ಗ್ರಾಮದಲ್ಲಿ ಸ್ಥಳೀಯ ಮನೆಯ ಮಾಡಿನ ಮೇಲೆ ರಾತ್ರಿ ವೇಳೆ ಕುಳಿತುಕೊಂಡಿದ್ದನ್ನು ನೋಡಿ ಹುಡುಗನೊಬ್ಬ ಭಯದಿಂದ ಮಾತನಾಡಿದ್ದು, ಆಗ ಮಾತಿನ ಚಕಮಕಿ ನಡೆದಿದ್ದು, ಆಗ ಸ್ಥಳೀಯರು ಕೈ ಕಾಲು ಕಟ್ಟಿ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದರು.