ಕರ್ನಾಟಕ

karnataka

ವಿಡಿಯೋ ಕಾಲ್​ ತಂದ ಆಪತ್ತು: ಬೈಕ್​ನಿಂದ ಬಿದ್ದು ಯೋಧನ ಪತ್ನಿ ಧಾರುಣ ಸಾವು

By

Published : Nov 24, 2020, 1:42 AM IST

Updated : Nov 24, 2020, 6:04 AM IST

ಬಾದಾಮಿ ತಾಲೂಕಿನ ತಿಮ್ಮಸಾಗರ ಗ್ರಾಮದ‌ ಯೋಧ ಶೇಖರಯ್ಯ ವಿಭೂತಿ ಬೆಳಿಗ್ಗೆ ಕರ್ತವ್ಯಕ್ಕಾಗಿ ಜಮ್ಮು ಕಾಶ್ಮೀರಕ್ಕೆ ಹೊರಡಬೇಕಿದ್ದರಿಂದ, ಪತ್ನಿ ಪುಷ್ಪಲತಾ (35)ರನ್ನು ಅವರ ತವರು ಮನೆ ಹಿರೇಮಳಗಾವಿ ಗ್ರಾಮಕ್ಕೆ ಬಿಡಲು ನಿನ್ನೆ ಸಂಜೆ ಹೊರಟಿದ್ದ ಸಮಯದಲ್ಲಿ ಘಟನೆ ನಡೆದಿದೆ.

ಯೋಧನ ಪತ್ನಿ ಧಾರುಣ ಸಾವು
ಯೋಧನ ಪತ್ನಿ ಧಾರುಣ ಸಾವು

ಬಾಗಲಕೋಟೆ: ಬೈಕ್​ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮೊಬೈಲ್​ನಲ್ಲಿ ವಿಡಿಯೋ ಕಾಲ್​ನಲ್ಲಿ ಮಾತನಾಡಲು ಹೋಗಿ, ಯೋಧನ ಪತ್ನಿಯೊಬ್ಬರು ಮೃತ ಪಟ್ಟಿರುವ ಘಟನೆ ಜಿಲ್ಲೆಯ ಮೂಗನೂರು ಗ್ರಾಮದಲ್ಲಿ ಜರುಗಿದೆ.

ಯೋಧ ಬೈಕ್​ ನಡೆಸುತ್ತಿದ್ದರೆ, ಪತ್ನಿ ಮೊಬೈಲ್​ನಲ್ಲಿ ವಿಡಿಯೋ ಕರೆಯಲ್ಲಿ ಮಗ್ನರಾಗಿದ್ದಾರೆ. ಈ ವೇಳೆ ರಸ್ತೆಯ ಹಂಪ್ಸ್​ಗೆ ಮೇಲೆ ಬೈಕ್ ಏರಿದಾಗ ಯೋಧನ ಪತ್ನಿ ಪುಷ್ಪಲತಾ (35)ಆಯತಪ್ಪಿ ತಲೆ ಕೆಳಗಾಗಿ ಬಿದ್ದಿದ್ದಾರೆ. ತಲೆಗೆ ಗಂಭೀರ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪತ್ನಿಯನ್ನು ತವರು ಸೇರಿಸಿ ಸೇನೆಗೆ ಮರಳುವ ಆತುರದಲ್ಲಿದ್ದ ಯೋಧ, ಪ್ರೀತಿಯ ಪತ್ನಿಯ ಸಾವಿನಿಂದ ಕಣ್ಣೀರಿಟ್ಟು, ಗೋಳಾಡಿದ ಘಟನೆ ಎಂತಹವರ ಮನಸ್ಸನ್ನು ಕರಗಿಸುವಂತಿತ್ತು.

ಬಾದಾಮಿ ತಾಲೂಕಿನ ತಿಮ್ಮಸಾಗರ ಗ್ರಾಮದ‌ ಯೋಧ ಶೇಖರಯ್ಯ ವಿಭೂತಿ ಬೆಳಿಗ್ಗೆ ಕರ್ತವ್ಯಕ್ಕಾಗಿ ಜಮ್ಮು ಕಾಶ್ಮೀರಕ್ಕೆ ಹೊರಡಬೇಕಿದ್ದರಿಂದ, ಪತ್ನಿ ಪುಷ್ಪಲತಾ (35)ರನ್ನು ಅವರ ತವರು ಮನೆ ಹಿರೇಮಳಗಾವಿ ಗ್ರಾಮಕ್ಕೆ ಬಿಡಲು ನಿನ್ನೆ ಸಂಜೆ ಹೊರಟಿದ್ದ ಸಮಯದಲ್ಲಿ ಘಟನೆ ನಡೆದಿದೆ.

ಸ್ಥಳಕ್ಕಾಗಮಿಸಿದ ಪೊಲೀಸರು ಪುಷ್ಪಲತಾ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗವ ವೇಳೆ ಯೋಧ ಶೇಖಯ್ಯ ಮತ್ತು ಕುಟುಂಬಸ್ಥರ ಆಕ್ರಂದನ ಕರುಳು ಹಿಂಡುವಂತಿತ್ತು. ಅಮೀನಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದಾರೆ.

Last Updated : Nov 24, 2020, 6:04 AM IST

ABOUT THE AUTHOR

...view details