ಕರ್ನಾಟಕ

karnataka

By

Published : Oct 19, 2019, 11:13 PM IST

ETV Bharat / state

ಸಾವ​ರ್ಕರ್‌ ಬಗ್ಗೆ ಸಿದ್ದರಾಮಯ್ಯ ಮಾತನಾಡೋದು ಯೋಗ್ಯವಲ್ಲ.. ಶಾಸಕ ಭರತ್​ ಶೆಟ್ಟಿ

ವೀರ ಸಾವರ್ಕರ್​​ಗೆ ಭಾರತ ರತ್ನ ಪ್ರಶಸ್ತಿ ನೀಡುವುದನ್ನು ವಿರೋಧಿಸುತ್ತಿರುವ  ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಂಗಳೂರು ಉತ್ತರ ಮತಕ್ಷೇತ್ರದ ಶಾಸಕ ಡಾ.ಭರತ್​ ಶೆಟ್ಟಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಶಾಸಕ ಭರತ್​ ಶೆಟ್ಟಿ

ಬಾಗಲಕೋಟೆ:ಕಾಂಗ್ರೆಸ್​ ತನ್ನ ಅಧಿಕಾರಾವಧಿಯಲ್ಲಿ ತಮಗೆ ಬೇಕಾದವರಿಗೆ ಪ್ರಶಸ್ತಿ ನೀಡಿದ್ದು ಈಗ ಸಾವರ್ಕರ್​ ಬಗ್ಗೆ ಮಾತನಾಡುವುದು ಯೋಗ್ಯವಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಶಾಸಕ ಭರತ್​ ಶೆಟ್ಟಿ ಟಾಂಗ್ ನೀಡಿದ್ದಾರೆ.

ಶಾಸಕ ಭರತ್​ ಶೆಟ್ಟಿ..

ನಗರದಲ್ಲಿ ದಂತ ಮಹಾವಿದ್ಯಾಲಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ ನಂತರ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಕೀಯ ಗಿಮಿಕ್​ಗಾಗಿ ವೀರ ಸಾವರ್ಕರ್​ಗೆ​ ಪ್ರಶಸ್ತಿ ನೀಡುವುದಕ್ಕೆ ವಿರೋಧಿಸುತ್ತಿದ್ದಾರೆ. ಹೈಕಮಾಂಡ್​ನಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ಹೇಳಿಕೆ ನೀಡುತ್ತಿದ್ದು, ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ದೇಶಕ್ಕಾಗಿ ಮಡಿದ ವೀರ ಸಾವರ್ಕರ್‌ ಅಂಚೆ ಚೀಟಿ ಬಿಡುಗಡೆ ಮಾಡಿದ್ದರು ಎಂದರು.

ವೀರ ಸಾವರ್ಕರ್ ದೇಶಕ್ಕಾಗಿ ಹಾಗೂ ಸಂಸ್ಕೃತಿ ಬೆಳೆಸಲು ಏನು ಮಾಡಿದ್ದಾರೆ ಎಂಬುದು ನಮ್ಮಗೆ ಗೊತ್ತು. ಸಿದ್ದರಾಮಯ್ಯನವರು ಏನು ಮಾಡಿದ್ದಾರೆ ಎಂಬುದೂ ಗೊತ್ತು. ಅವರ ಬಗ್ಗೆ ಮಾತನಾಡುವುದೇ ಸಮಂಜಸವಲ್ಲ ಎಂದು ಹೇಳುವ ಮೂಲಕ ಟಾಂಗ್ ನೀಡಿದರು.

For All Latest Updates

ABOUT THE AUTHOR

...view details