ಕರ್ನಾಟಕ

karnataka

ETV Bharat / state

ಮಲಗಿದ್ದವನನ್ನು ಎಬ್ಬಿಸಿ ಹೈಕಮಾಂಡ್​​ ನನಗೆ ಸಚಿವ ಸ್ಥಾನ ನೀಡಿದೆ... ಹೀಗೆ ಹೇಳಿದ್ಯಾರು? - ministership to Lakshman savadi

ಡಿಸಿಎಂ ಲಕ್ಷ್ಮಣ ಸವದಿ ಭದ್ರಗಿರಿಯ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ನನಗೆ ಮಂತ್ರಿ ಸ್ಥಾನ ಸಿಗುತ್ತೆ ಅಂತ ಊಹಿಸಿರಲಿಲ್ಲ. ನಾನು ಮಲಗಿದ್ದ ವೇಳೆ ನನ್ನನ್ನು ಎಬ್ಬಿಸಿ ಮಂತ್ರಿ ಸ್ಥಾನ ನೀಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಭದ್ರಗಿರಿಯ ದೀಪೋತ್ಸವದಲ್ಲಿ ಡಿಸಿಎಂ ಹೇಳಿಕೆ

By

Published : Nov 4, 2019, 12:02 PM IST

Updated : Nov 4, 2019, 12:21 PM IST

ಬಾಗಲಕೋಟೆ: ನಾನು ಮಂತ್ರಿಯಾಗಬೇಕು ಎಂಬ ಆಸೆಯನ್ನೇ ಇಟ್ಟುಕೊಂಡಿರಲಿಲ್ಲ. ಮಲಗಿದ್ದವನನ್ನ ಎಬ್ಬಿಸಿ ಮಂತ್ರಿ ಮಾಡಿ , ಡಿಸಿಎಂ ಸ್ಥಾನವನ್ನ ಕೊಟ್ಟಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಜಿಲ್ಲೆಯ ರಬಕವಿ -ಬನ್ನಹಟ್ಟಿ ತಾಲೂಕಿನ ಹಳಂಗಲಿ ಗ್ರಾಮದಲ್ಲಿ ಭದ್ರಗಿರಿಯ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಮಂತ್ರಿ ಆಗಬೇಕೆಂದು ಎಂದಿಗೂ ಆಸೆ ಪಟ್ಟವನಲ್ಲ. ನನಗೆ ಮಂತ್ರಿ ಆಗುತ್ತೇನೆ ಎಂದು ಗೊತ್ತಿರಲಿಲ್ಲ. ನಾನು ರಾತ್ರಿ ಮಲಗಿದ್ದ ವೇಳೆ 2 ಗಂಟೆಗೆ ಕರೆ ಮಾಡಿ ನನ್ನನ್ನು ಮಂತ್ರಿಯನ್ನಾಗಿ ಮಾಡಿದ್ದಾರೆ ಎಂದರು.

ಭದ್ರಗಿರಿಯ ದೀಪೋತ್ಸವದಲ್ಲಿ ಡಿಸಿಎಂ ಹೇಳಿಕೆ

ಹರ ಮುನಿದರು ಗುರು ಕಾಯುವನು ಎಂಬಂತೆ. ರಾಜಕಾರಣಿಗಳಿಗೆ ದೇವರಾದ ಮತದಾರರು ಕೈಬಿಟ್ಟರೂ, ಗುರುವಿನಂತಿರುವ ಮಠಾಧೀಶರ ಹಾಗೂ ಮಹಾತ್ಮರ ಆಶೀರ್ವಾದದಿಂದ ನಾನು ಮಂತ್ರಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಮಂತ್ರಿಯಾದ ಬಳಿಕ ಹಲವು ಪತ್ರಕರ್ತರು ಹಾಗೂ ಸಾರ್ವಜನಿಕರು ನನ್ನ ಬಳಿ ಸೋತಿದ್ದರೂ ಸಹ ನೀವು ಹೇಗೆ ಮಂತ್ರಿಯಾಗಲು ಸಾಧ್ಯ ಎಂಬ ಪ್ರಶ್ನೆ ಕೇಳಿದ್ದರು. ಅದಲ್ಲದೆ ನಾನಗೆ ಮಂತ್ರಿ ಸ್ಥಾನ ದೊರೆತಿದ್ದಕ್ಕೆ ಹಲವರಿಗೆ ಆಶ್ಚರ್ಯವೂ ಸಹ ಉಂಟಾಗಿದೆ ಎಂದು ಕಾಲೆಳೆದಿದ್ದಾರೆ.

Last Updated : Nov 4, 2019, 12:21 PM IST

ABOUT THE AUTHOR

...view details