ಕರ್ನಾಟಕ

karnataka

ETV Bharat / state

ಸ್ವಾಮೀಜಿಗಳಿಗೆ ಸಿದ್ದರಾಮಯ್ಯ ಅವಮಾನ ವಿಚಾರ: ಸತೀಶ್​ ಜಾರಕಿಹೊಳಿ ಪ್ರತಿಕ್ರಿಯೆ ಏನು? - ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಸ್ಪಷ್ಟತೆ ಇಲ್ಲ: ಸತೀಶ್​ ಜಾರಕಿಹೊಳಿ

ಸಿದ್ದರಾಮಯ್ಯ ಅವರು ಯಾವ ಸಂದರ್ಭದಲ್ಲಿ ಮಾತನಾಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಈ ಕುರಿತು ಅವರರೊಂದಿಗೆ ಚರ್ಚಿಸಿ ನಂತರ ಪ್ರತಿಕ್ರಿಯಿಸುತ್ತೇನೆಂದು ಸತೀಶ್ ಜಾರಕಿಹೊಳಿ ಹೇಳಿದರು.

Satish Jarkiholi reaction on Siddaramaiah statement
ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಸ್ಪಷ್ಟತೆ ಇಲ್ಲ: ಸತೀಶ್​ ಜಾರಕಿಹೊಳಿ

By

Published : Mar 25, 2022, 10:55 PM IST

ಬಾಗಲಕೋಟೆ:ಹಿಂದೂ ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕುವಾಗ ಮುಸ್ಲಿಂ ಹೆಣ್ಣು ಮಕ್ಕಳು ತಲೆ ಮೇಲೆ ದುಪಟ್ಟಾ ಹಾಕಿಕೊಳ್ಳಬಾರದೇ ಎಂದು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಈ ಬಗ್ಗೆ ನನಗೇನು ಗೊತ್ತಿಲ್ಲ. ವಿಚಾರ ತಿಳಿದುಕೊಂಡು ಮಾತನಾಡುತ್ತೇನೆ ಎಂದರು.

ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಸ್ಪಷ್ಟತೆ ಇಲ್ಲ: ಸತೀಶ್​ ಜಾರಕಿಹೊಳಿ

ಹಿಂದೂ ದೇಗುಲದ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ವಿಚಾರವಾಗಿ ಮಾತನಾಡಿ, ಇದೆಲ್ಲಾ ಯಶಸ್ವಿ ಆಗೋದಿಲ್ಲ. ಸಾವಿರಾರು ವರ್ಷಗಳಿಂದ ಎಲ್ಲರೂ ಸೇರಿ ವ್ಯಾಪಾರ ಮಾಡಿದ್ದಾರೆ. ಸುಮ್ಮನೆ ಈ ವಿಚಾರದಲ್ಲಿ ರಾಜಕೀಯ ಬೆರೆಸುತ್ತಿದ್ದಾರೆ ಅಷ್ಟೇ. ಯಾರೋ ಹೇಳ್ತಾರೆ ಅಂತ ಹಿಂದೂಗಳನ್ನಾಗಲಿ, ಮುಸ್ಲಿಂರನ್ನಾಗಲಿ ಹೊರ ಹಾಕಲು ಸಾಧ್ಯವಿಲ್ಲ. ಹರ್ಷನ ಹತ್ಯೆ ಆಯ್ತು, ಹಿಜಾಬ್​ ಆಯ್ತು, ಈಗ ಈ ವಿಷಯ ಇಟ್ಟುಕೊಂಡಿದ್ದಾರೆ. ಇವರಿಗೆ ತಿಂಗಳಿಗೊಂದು ವಿಷಯ ಬೇಕು. ಅದಕ್ಕೆ ಇಂತಹ ವಿಚಾರಗಳಲ್ಲಿ ಸಮಾಜದ ಶಾಂತಿ ಕದಡುತ್ತಾರೆ ಎಂದರು.

ಅಭ್ಯರ್ಥಿಗಳ ಘೋಷಣೆ:ಪಕ್ಷದಲ್ಲಿ ಬೇಗ ಅಭ್ಯರ್ಥಿಗಳ ಘೋಷಣೆ ಮಾಡಬೇಕೆನ್ನುವ ಒತ್ತಡ ಇದೆ. ಹೀಗಾಗಿ, ಖಂಡಿತ 6 ತಿಂಗಳ ಮೊದಲೇ ಘೋಷಣೆಯಾಗಬಹುದು. ರಾಜ್ಯದಲ್ಲಿ ಅವದಿಗೂ ಮುನ್ನ ಚುನಾವಣೆ ಬಂದರೂ ಬರಬಹುದು. ಯಾವುದಕ್ಕೂ ಪಕ್ಷ ಸಿದ್ದವಾಗಿರುತ್ತೆ. ಡಿಕೆಶಿ ಮತ್ತು ಸಿದ್ದರಾಮಯ್ಯ ಅವರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟ ಪಡಿಸಿದರು.

ಇದನ್ನೂ ಓದಿ:ಚುನಾವಣೆ ಸುಧಾರಣೆ ಕುರಿತು ಚರ್ಚೆಗೆ 2 ದಿನ ಫಿಕ್ಸ್: ಸ್ಪೀಕರ್ ಕಾಗೇರಿ

For All Latest Updates

ABOUT THE AUTHOR

...view details