ಕರ್ನಾಟಕ

karnataka

ETV Bharat / state

ಮೇ 4 ರಿಂದ ಸ್ಯಾಂಡಲ್‍ವುಡ್ ಕ್ರಿಕೆಟ್ ಕಪ್ - ಸ್ಯಾಂಡಲ್‍ವುಡ್ ಕ್ರಿಕೆಟ್ ಕಪ್

ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ಯಾಂಡಲ್‍ವುಡ್ ಕ್ರಿಕೆಟ್ ಕಪ್​ ಪಂದ್ಯಾವಳಿ ಮೇ 4 ರಿಂದ 8ರವರೆಗೆ ಐದು ದಿನಗಳ ಕಾಲ ನಡೆಯಲಿದೆ. 150ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ..

Sandalwood Cricket Cup in Bagalkot
ಚಿತ್ರ ನಟ ನಟಿಯರ ಕ್ರಿಕೆಟ್ ಪಂದ್ಯಾವಳಿ ಆಯೋಜನೆ

By

Published : Mar 11, 2022, 7:33 PM IST

ಬಾಗಲಕೋಟೆ : ಮೇ 4 ರಿಂದ 8ರವರೆಗೆ ಐದು ದಿನಗಳ ಕಾಲ ಸ್ಯಾಂಡಲ್‍ವುಡ್ ಕ್ರಿಕೆಟ್ ಕಪ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದೆ. ಇದರಲ್ಲಿ ಪ್ರಮುಖ ನಟ-ನಟಿಯರು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಸ್ಥಳೀಯರಿಗೆ ಮನರಂಜನೆ ನೀಡಲಿದ್ದಾರೆ ಎಂದು ನಟಿ ಮಯೂರಿ ಶಾ ತಿಳಿಸಿದರು.

ಚಿತ್ರ ನಟ-ನಟಿಯರ ಕ್ರಿಕೆಟ್ ಪಂದ್ಯಾವಳಿ ಆಯೋಜನೆ..

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದನಕೊಳ್ಳದ ಡಾ.ಶಿವಕುಮಾರ್ ಸ್ವಾಮೀಜಿ ಅವರ ಆಶೀರ್ವಾದದಿಂದ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ. ಸಿದ್ದನಕೊಳ್ಳ ಕಲಾಪೋಷಕರ ಮಠ, ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ, ಪಿ. ದೀಕ್ಷಿತ ಫೌಂಡೇಶನ್, ಎ.ಬಿ.ನೆಟ್ವಕ್ರ್ಸ್ ಬೆಂಗಳೂರು, ಬ್ಲೂಪಿಂಚ್ ಇವೆನಟ್ಸ್, ಪಿಯೋನಿಕ್ಸ್ ನೆಟವರ್ಕ ಹಾಗೂ ನವ ಕರ್ನಾಟಕ ಚಲನಚಿತ್ರ ಅಕ್ಯಾಡೆಮಿ, ಸಲ್ಯೂಟ್ ಗ್ರಾಮೀಣ ಅಭಿವೃದ್ದಿ ಯುವ ಸಂಸ್ಥೆ ಕರ್ನಾಟಕ ವತಿಯ ಸಹಯೋಗದಲ್ಲಿ ನಡೆಯಲಿದ್ದು, ಎಂಟು ತಂಡಗಳು ಪಂದ್ಯವಾಳಿಯಲ್ಲಿ ಭಾಗವಹಿಸಲಿವೆ ಎಂದು ಹೇಳಿದರು.

ನಿರ್ದೇಶಕರಾದ ಅದತ್ ಖಾನ ಎಂಬುವರು ಮಾತನಾಡಿ, 150ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಪ್ರಮುಖವಾಗಿ ಉಪೇಂದ್ರ, ಸುದೀಪ್, ಜಗ್ಗೇಶ್, ರಾಗಿಣಿ, ಹರಿಪ್ರಿಯಾ, ಥ್ಲಿಲ್ಲರ್ ಮಂಜು, ಕಾಮಿಡಿ ಕಲಾವಿದರು ಸೇರಿದಂತೆ ಇನ್ನೂ ಪ್ರಮುಖ ನಟ-ನಟಿಯರು ಆಗಮಿಸುವ ನಿರೀಕ್ಷೆಯಿದೆ ಎಂದರು.

ಪಂದ್ಯಾವಳಿಯಲ್ಲಿ ಕಪ್ ಗೆದ್ದವರಿಗೆ 1 ಲಕ್ಷ ರೂ. ರನ್ನರ್​ಅಪ್ 50 ಸಾವಿರ ರೂ. ನಂತರ ಮೂರನೇ ಸ್ಥಾನಕ್ಕೆ 25 ಸಾವಿರ ರೂ. ಬಹುಮಾನ ನೀಡಲಾಗುತ್ತದೆ. ಈ ಪಂದ್ಯಾವಳಿಗೆ ಬಂದಂತಹ ಹಣವನ್ನು ಸಿದ್ದನಕೊಳ್ಳದಲ್ಲಿ ನಿರ್ಮಾಣವಾಗಲಿರುವ ಕಲಾವಿದರ ಭವನಕ್ಕೆ ನೀಡಲಾಗುವುದು ಎಂದರು.

ಮೇ 8ರಂದು ಚಿತ್ರ ನಟಿಯರ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಜೊತೆಗೆ ಸಮಾರೋಪ ಹಿನ್ನೆಲೆಯಲ್ಲಿ ಖಾಸಗಿ ವಾಹಿನಿಗಳ ಸಂಗೀತ ಕಲಾವಿದರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಿದ್ದನಕೊಳ್ಳದ ಶಿವಕುಮಾರ ಸ್ವಾಮೀಜಿ, ಪ್ರೇಮ ಚಿರಗೋಲ್, ರವಿ ಕುಮಟಗಿ, ಪ್ರವೀಣ ಪತ್ರಿ, ಮಹೇಶ ಹೊಸಗೌಡ್ರ ಸೇರಿದಂತೆ ಮತ್ತಿತರರು ಇದ್ದರು.

ಇದನ್ನೂ ಓದಿ:ಪೊಲೀಸರು ಜಪ್ತಿ ಮಾಡಿದ್ದ ಹಳೆ ವಾಹನಗಳು ಅಗ್ನಿಗೆ ಆಹುತಿ

ABOUT THE AUTHOR

...view details