ಕರ್ನಾಟಕ

karnataka

ಸಾಗರೋತ್ತರ ಕನ್ನಡಿಗರ ಜೊತೆ ಕುಮಾರಸ್ವಾಮಿ ಸಂವಾದ

By

Published : Sep 8, 2020, 12:56 PM IST

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ಈ ಸಂವಾದದಲ್ಲಿ ಭಾಗವಹಿಸಿದ 50 ದೇಶಗಳಲ್ಲಿ ವಾಸಿಸುತ್ತಿರುವ ಎಲ್ಲರಿಗೂ ಅಭಿನಂದನೆ. ನೀವು ಎಲ್ಲರೂ ನಮ್ಮ ಕುಟುಂಬವಿದ್ದಂತೆ. ನೀವು ಎಲ್ಲೇ ಇದ್ದರೂ ಕೂಡ ಕನ್ನಡಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತ ಬಂದಿದ್ದೀರಿ. ನಿಮ್ಮ ಕುಟುಂಬಕ್ಕೂ ಅಭಿನಂದನೆಗಳು ಎಂದು ಹೇಳಿ ಸಂವಾದವನ್ನು ಪ್ರಾರಂಭಿಸಿದರು.

sagarotara kannadigara Conversation Program-14 HDK participated
ಸಾಗರೋತ್ತರ ಕನ್ನಡಿಗರ ಸಂವಾದ ಕಾರ್ಯಕ್ರಮ-14, ಮುಖ್ಯ ಅತಿಥಿಯಾಗಿ ಮಾಜಿ ಸಿಎಂ ಹೆಚ್​​ಡಿಕೆ ಭಾಗಿ

ಬಾಗಲಕೋಟೆ: ಸಾಗರೋತ್ತರ ಕನ್ನಡಿಗರು ನಡೆಸಿಕೊಡುವ ಸಾಗರೋತ್ತರ ಕನ್ನಡಿಗರ 14ನೇ ಸಂವಾದ ಕಾರ್ಯಕ್ರಮದ ಈ ಭಾನುವಾರದ ವಿಶೇಷ ಅತಿಥಿಗಳಾಗಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭಾಗಿಯಾಗಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಇಟಲಿ ದೇಶದಿಂದ ಹೇಮೆಗೌಡ ಮಧು ನಡೆಸಿಕೊಟ್ಟರು.

ಸಾಗರೋತ್ತರ ಕನ್ನಡಿಗರ ಸಂವಾದ ಕಾರ್ಯಕ್ರಮ: ಮುಖ್ಯ ಅತಿಥಿಯಾಗಿ ಮಾಜಿ ಸಿಎಂ ಹೆಚ್​​ಡಿಕೆ ಭಾಗಿ

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ಈ ಸಂವಾದದಲ್ಲಿ ಭಾಗವಹಿಸಿದ 50 ದೇಶಗಳಲ್ಲಿ ವಾಸಿಸುತ್ತಿರುವ ಎಲ್ಲರಿಗೂ ಅಭಿನಂದನೆ. ನೀವು ಎಲ್ಲರೂ ನಮ್ಮ ಕುಟುಂಬವಿದ್ದಂತೆ. ನೀವು ಎಲ್ಲೇ ಇದ್ದರೂ ಕೂಡ ಕನ್ನಡಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತ ಬಂದಿದ್ದೀರಿ. ನಿಮ್ಮ ಕುಟುಂಬಕ್ಕೂ ಅಭಿನಂದನೆಗಳು ಎಂದು ಹೇಳಿ ಸಂವಾದವನ್ನು ಪ್ರಾರಂಭಿಸಿದರು.

ನೀವು ಸಾವಿರಾರು ಕಿ.ಮೀ. ದೂರವಿದ್ದರೂ ನೀವು ನಮ್ಮ ಜೊತೆಗಿದ್ದೀರಿ. ಸಾಗರೋತ್ತರ ಕನ್ನಡಿಗರ ನಡುವಳಿಕೆಗಳಿಗೆ ನನ್ನ ಹೃದಯ ತುಂಬಿದ ಕೃತಜ್ಞತೆ ಹೇಳಬಯಸುತ್ತೇನೆ. ನೀವು ಬೇರೆ ಬೇರೆ ದೇಶಗಳಲ್ಲಿದ್ದರೂ ಕನ್ನಡತನವನ್ನು ಮರೆಯದೇ "ಎಲ್ಲಾದರು ಇರು ಎಂತಾದರು ಇರು" ಎಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಕ್ಕೆ ನನ್ನ ಧನ್ಯವಾದಗಳು ಎಂದರು.

ವಿದೇಶಕ್ಕೆ ಹೋದ ಜನರು ಇವತ್ತಿನ ದಿವಸ ಸಾಮಾಜಿಕ ಜಾಲತಾಣದ ಮುಖಾಂತರ ನಮ್ಮ ಮನೆಯ ಮತ್ತು ನಮ್ಮ ಕುಟುಂಬದ ಸದಸ್ಯರಾಗಿದ್ದೀರಿ. ಅಧಿಕಾರದಲ್ಲಿ ಇದ್ದಾಗ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನಾನು ಹಣ ಗಳಿಸಲು ಮುಖ್ಯಮಂತ್ರಿಯಾಗಲಿಲ್ಲ. ಹೆಸರು ಮಾಡಲು ಮುಖ್ಯಮಂತ್ರಿಯಾಗಲಿಲ್ಲ. ಈ ಕನ್ನಡ ನಾಡಿನ ಮಣ್ಣಿನ ಮಗನಾದ ನಾನು ನಮ್ಮ ರೈತರಿಗೋಸ್ಕರ ಸಾಕಷ್ಟು ಕೆಲಸ ಮಾಡಿದ್ದು, ಮುಂದೆಯೂ ಮಾಡುತ್ತೇನೆ. ನಮ್ಮ ಜನ ನನ್ನನ್ನು ಮರೆತಿಲ್ಲ. ನನ್ನನ್ನು ಎರಡು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಅವರ ಋಣ ನನ್ನ ಮೇಲೆ ಸಾಕಷ್ಟಿದೆ ಎಂದರು.

ಇದೇ ಸಮಯದಲ್ಲಿ ಡ್ರಗ್ಸ್ ವಿಚಾರವಾಗಿ ಮಾತನಾಡಿ, ಡ್ರಗ್ಸ್ ಮಾಫಿಯಾ ರಾಜ್ಯದಲ್ಲಿ ಮತ್ತು ದೇಶದಲ್ಲಿ ಸದ್ಯ ಮೀಡಿಯಾದಲ್ಲಿ ಕೂಡ ತಲ್ಲಣ ಹುಟ್ಟು ಹಾಕುತ್ತಿದೆ. ಅದನ್ನು ನಾವು ಬುಡ ಸಮೇತ ಕಿತ್ತು ಹಾಕಬೇಕಾಗಿದೆ ಎಂದರು. ನನ್ನ ಹತ್ತಿರ ಸಾಕಷ್ಟು ಜನಪರ ಯೋಜನೆಗಳಿವೆ. ಅದನ್ನ ನಾವು ಬೇರೆ ಪಕ್ಷದವರಿಗೆ ಹೇಳಿ ಮಾಡಿಸೋದು ಕಷ್ಟವಾಗುತ್ತದೆ.

ಯುವಕರು ನಮ್ಮ ಆಸ್ತಿ, ಸಂಪತ್ತು. ಯುವಕರಿಗೆ ದುಡಿಯುವ ಶಕ್ತಿ ಸರ್ಕಾರ ಕೊಡಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಯುವಕರ ಸಲುವಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಎಂದರು.

ನಾನು ನಿಮ್ಮವನು, ಬೇರೆಯವನಲ್ಲ:

ಈ ಸಂವಾದದಲ್ಲಿ ಮುಖ್ಯಮಂತ್ರಿಯಾಗಿ ಕೆಲಸದ ವಿಚಾರವಾಗಿ, ಬರೀ ದಕ್ಷಿಣ ಕರ್ನಾಟಕದ ಭಾಗದ ಮುಖ್ಯಮಂತ್ರಿಯಲ್ಲ. ನಮ್ಮ ಉತ್ತರ ಕರ್ನಾಟಕದ ಕಡೆಗೂ ಗಮನ ನೀಡಿ? ಎನ್ನುವ ಬಸವ ಪಾಟೀಲರ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಉತ್ತರ ಕರ್ನಾಟಕ ಭಾಗದ ಜನರಿಗೆ ಅಂದರೆ 5ರಿಂದ 6 ಲಕ್ಷ ಜನರಿಗೆ ಉದ್ಯೋಗ ಕೊಡುವ ಆಸೆ ನನ್ನದು. ಅದನ್ನು ನಾನು ಮುಂದಿನ ದಿನಗಳಲ್ಲಿ ಮಾಡದೆ ಬಿಡುವುದಿಲ್ಲ. ಅದು ನನ್ನ ಮಹತ್ವದ ಬಯಕೆ ಕೂಡ ಆಗಿದೆ ಎಂದರು.

ಸಾಗರೋತ್ತರ ಕನ್ನಡಿಗರ ಸಂವಾದ

ಯುಕೆದಲ್ಲಿ ಸಣ್ಣ ಅಪಘಾತ ಆದ್ರೆ ಬರೀ ಐದು ನಿಮಿಷದಲ್ಲಿ ಆಂಬ್ಯುಲೆನ್ಸ್ ಬರುತ್ತೆ. ಆದ್ರೆ ನಮ್ಮ ದೇಶದಲ್ಲಿ ಮೊದಲು ಲಾಯರ್​​​ಗಳು ಬರ್ತಾರೆ. ಅವರು ಆ ಕೇಸ್​​ಅನ್ನು 10ರಿಂದ 15 ವರ್ಷ ನಡೆಸುತ್ತಾರೆ. ಹಿಗಾದ್ರೆ ಹೇಗೆ ದೇಶ ಉದ್ಧಾರವಾಗತ್ತೆ ಎಂದು ಪ್ರಶ್ನೆ ಮಾಡಿದರು. ಕರ್ನಾಟಕದಲ್ಲಿ ನಾನು ನಮ್ಮ ರಾಜ್ಯದ 30 ಜಿಲ್ಲೆಗಳ ಸಂಸ್ಕೃತಿಯನ್ನು ಬೆಳಸಲು "ಜಾನಪದ ಜಾತ್ರೆ" ಎನ್ನುವ ಕಾರ್ಯಕ್ರಮ ಮಾಡಿದ್ದೆ.

ನಾನು ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ನೀಡಿದ್ದೇನೆ. ಉತ್ತರ ಕರ್ನಾಟಕದ ಜನ ನೀವು ಯಾವುದೇ ಕಾರಣಕ್ಕೂ ನನ್ನನ್ನು ಬೇರೆಯವನನ್ನಾಗಿ ನೋಡಬೇಡಿ. ನಾನು ನಿಮ್ಮವನು. ನಿಮ್ಮ ಸೇವಕನು ಎಂದು ತಿಳಿದುಕೊಳ್ಳಿ ಎಂದರು.

For All Latest Updates

TAGGED:

Bagalkote

ABOUT THE AUTHOR

...view details