ಕರ್ನಾಟಕ

karnataka

ETV Bharat / state

ವಿಶ್ವ ಏಡ್ಸ್ ದಿನ: ಮಾರಕ​​ ಕಾಯಿಲೆ ಬಗ್ಗೆ ಜಾಗೃತಿ ಜಾಥಾ - worlds aids day celebration news

ವಿಶ್ವ ಏಡ್ಸ್ ದಿನದ ಅಂಗವಾಗಿ ಬಾಗಲಕೋಟೆಯ ನವನವಗರದಲ್ಲಿ ಜಾಥಾ ನಡೆಸಿ, ಮಾರಕ ಕಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

aids
ಏಡ್ಸ್​​ ಜಾಗೃತಿ ಜಾಥಾ

By

Published : Dec 1, 2019, 4:46 PM IST

ಬಾಗಲಕೋಟೆ:ವಿಶ್ವ ಏಡ್ಸ್​​ ದಿನದ ಅಂಗವಾಗಿ ಇಂದು ಬಾಗಲಕೋಟೆ ನವನವಗರದಲ್ಲಿ ಮಾರಣಾಂತಿಕ​​ ಕಾಯಿಲೆ ಕುರಿತು ಜನರಲ್ಲಿ ವಿಶೇಷ ಜಾಥಾ ಮೂಲಕ ಜಾಗೃತಿ ಮೂಡಿಸಲಾಯ್ತು.

ಆರೋಗ್ಯ ಇಲಾಖೆ,ಕೆಸಾಪ್ ಸೇರಿದಂತೆ ಇತರ ಸಂಸ್ಥೆಗಳಿಂದ ಜಾಥಾ,ಜಾನಪದ ಶೈಲಿ ಗೀ ಗೀ ಪದಗಳ ಮೂಲಕ ಹಾಗೂ ಆಶಾ ಕಾರ್ಯಕರ್ತರು ಸೇರಿದಂತೆ ಇತರ ಮಹಿಳಾ ಸಂಘಟನೆಗಳಿಂದಲೂ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಾಯ್ತು. ಈ ಜಾಥಾಗೆ ಶಾಸಕ ವೀರಣ್ಣ ಚರಂತಿಮಠ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಗಂಗೂಬಾಯಿ ಮಾನಕರ್ ಚಾಲನೆ ನೀಡಿದರು.

ಆರೋಗ್ಯ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿ ಡಾ.ಅನಿಲ್​​​ ದೇಸಾಯಿ ಮಾತನಾಡಿ, ಕಳೆದ ಸಾಲಿನಿಂದ ಪ್ರಸಕ್ತ ಸಾಲಿಗೆ ಸಾಮಾನ್ಯರಲ್ಲಿ ಕಾಯಿಲೆ ಪೀಡಿತರ ಸಂಖ್ಯೆ ಶೇ.2.5 ರಿಂದ ಶೇ.2.2ಕ್ಕೆ ಇಳಿಮುಖವಾದರೆ, ಗರ್ಭಿಣಿಯರಲ್ಲಿ ಶೇ.0.085 ರಿಂದ ಶೇ.0.082 ಕ್ಕೆ ಇಳಿಮುಖವಾಗಿರುವುದು ಕಂಡುಬಂದಿದೆ ಎಂದ್ರು.

ಏಡ್ಸ್​​ ಜಾಗೃತಿ ಜಾಥಾ

ಜಿಲ್ಲೆಯಲ್ಲಿ ಒಟ್ಟು 3 ಲೈಂಗಿಕ ರೋಗ ಪತ್ತೆ ಕೇಂದ್ರಗಳಿದ್ದು (ಸುರಕ್ಷಾ ಕ್ಲಿನಿಕ್) ಇವುಗಳ ಅಡಿಯಲ್ಲಿ ಏಪ್ರಿಲ್​​​ನಿಂದ ಅಕ್ಟೋಬರ್​​-2019ವರೆಗೆ ಒಟ್ಟು 6,810 ತಪಾಸಣೆ ಮಾಡಲಾಗಿ ಶೇ.62 ರಷ್ಟು ಪ್ರಗತಿ ಸಾಧಿಸಲಾಗಿದೆ. ಎಚ್ಐವಿ ಪೀಡಿತ ಹೆರಿಗೆಗೆ ಬಂದಿರುವ ಮಹಿಳೆಯರಿಂದ ಮಕ್ಕಳಿಗೆ ರೋಗ ಹರಡದಂತೆ ತಡೆಯಲು ಸಾಕಷ್ಟ ಶ್ರಮವಹಿಸಿ, ನೂರಕ್ಕೆ 99 ರಷ್ಟು ಸಾಧನೆ ಮಾಡಲಾಗಿದ್ದು ಹೆಮ್ಮೆಯ ಸಂಗತಿ ಎಂದು ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ.ಜಯಶ್ರೀ ಎಮ್ಮಿ ತಿಳಿಸಿದ್ರು.

For All Latest Updates

ABOUT THE AUTHOR

...view details