ಕರ್ನಾಟಕ

karnataka

ETV Bharat / state

ಮಾರಕ ಗುಟ್ಕಾ ತಯಾರಿಕಾ ಕೇಂದ್ರದ ಮೇಲೆ ಪೊಲೀಸ್​ ದಾಳಿ! - Bagalakote Latest Gutka News

ಗುಳೇದಗುಡ್ಡ ಪಟ್ಟಣದ ಜರ್ಲಿಯವರ ಗಲ್ಲಿಯಲ್ಲಿ ತಂಬಾಕು, ಅಡಿಕೆ ಮಿಶ್ರಿತ ಮಾರಕ ಗುಟ್ಕಾ ಮಾವ ತಯಾರಿಕೆ ಮಾಡುತ್ತಿರುವ ಕೇಂದ್ರದ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಆರೋಪಿಗಳು ವಶಕ್ಕೆ
ಆರೋಪಿಗಳು ವಶಕ್ಕೆ

By

Published : Nov 27, 2019, 3:02 AM IST

ಬಾಗಲಕೋಟೆ : ತಂಬಾಕು, ಅಡಿಕೆ ಮಿಶ್ರಿತ ಮಾರಕ ಗುಟ್ಕಾ ಮಾವ ತಯಾರಿಕೆ ಮಾಡುತ್ತಿರುವ ಕೇಂದ್ರದ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ವೀರಭದ್ರ ಹಂಡಿ, ಅಶೋಕ ಗಚ್ಚಿನಮನಿ ಹಾಗೂ ಗದಿಗೆಪ್ಪ ನಿಲ್ಲೂಗಲ್ಲ ಎಂಬುವರನ್ನು ಬಂಧಿಸಿದ್ದು, ಕಬ್ಬಿಣದ ಗಿರಣಿ, 4 ಕೆ.ಜಿ ತಂಬಾಕು, 4 ಕೆ.ಜಿ ಅಡಕೆ ಹಾಗೂ 4 ಕೆ.ಜಿ ಸುಣ್ಣ ಮತ್ತು 200 ಮಾವಾ ಇದ್ದ ಪ್ಯಾಕೇಟ್​ ವಶಕ್ಕೆ ಪಡೆದುಕೊಂಡಿದ್ದಾರೆ.

ಎಸ್. ಪಿ ಲೋಕೇಶ ಜಗಲಸಾರ ಆದೇಶದ ಮೆರೆಗೆ ಸಿಇಎನ್ ಪೋಲಿಸ್ ಠಾಣೆಯ ಅಧಿಕಾರಿ ಎಸ್.ಎಮ್ ತಹಶಿಲ್ದಾರ ನೇತೃತ್ವದ ತಂಡ ದಾಳಿ ಮಾಡಿದ್ದರು. ಈ ಬಗ್ಗೆ ಬಾಗಲಕೋಟೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

ABOUT THE AUTHOR

...view details