ಕರ್ನಾಟಕ

karnataka

By

Published : Nov 16, 2022, 10:58 AM IST

ETV Bharat / state

ಸಿದ್ದರಾಮಯ್ಯ ಎಲ್ಲ ಕಡೆ ದ್ರೋಹ ಬಗೆಯುತ್ತಲೇ ಬಂದಿದ್ದಾರೆ: ಸಚಿವ ಶ್ರೀರಾಮುಲು

ಸಿದ್ದರಾಮಯ್ಯ ದೊಡ್ಡ ಮನುಷ್ಯ. ದೇವೇಗೌಡರ ಹೆಸರು ಹೇಳಿಕೊಂಡು ಬಂದು ಬೆನ್ನಿಗೆ ಚೂರಿ ಹಾಕಿದರು. ಪರಮೇಶ್ವರ, ಖರ್ಗೆ ಸೇರಿದಂತೆ ಎಲ್ಲರನ್ನೂ ಮುಗಿಸುತ್ತಲೇ ಬಂದರು.- ಸಚಿವ ಶ್ರೀರಾಮಲು

Preliminary meeting of BJP workers
ಬಿಜೆಪಿ ಕಾರ್ಯಕರ್ತರ ಪೂರ್ವಭಾವಿ ಸಭೆ

ಬಾಗಲಕೋಟೆ:ವಿಪಕ್ಷ ನಾಯಕ ಸಿದ್ದರಾಮಯ್ಯ ಎಲ್ಲ ಕಡೆ ದ್ರೋಹ ಮಾಡುತ್ತಾ ಬಂದಿದ್ದಾರೆ. ಬಾದಾಮಿಯಲ್ಲಿ ರಾಜಕೀಯ ಪುನರ್‌ಜೀವನ ನೀಡಿದ ಚಿಮ್ಮನಕಟ್ಟಿ ಹಾಗೂ ಎಸ್.ಆರ್ ಪಾಟೀಲ್‌ ಅವರನ್ನು ಮುಗಿಸಿದ್ದಾರೆ ಎಂದು ಸಾರಿಗೆ ಸಚಿವ ಶ್ರೀರಾಮಲು ಟೀಕಿಸಿದ್ದಾರೆ. ನವನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಬಳ್ಳಾರಿಯಲ್ಲಿ ನಡೆಯುವ ಎಸ್​​ಟಿ ಯುವ ಮೋರ್ಚಾ ರಾಜ್ಯ ಮಟ್ಟದ ಸಮಾವೇಶ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸಿದ್ದರಾಮಯ್ಯ ವಿರುದ್ದ ಸಚಿವ ಶ್ರೀರಾಮುಲು ವಾಗ್ದಾಳಿ

ಬಾದಾಮಿಯಲ್ಲಿ ಗಂಟೆಗಟ್ಟಲೆ ಕೆಲಸ ಮಾಡಿ ಮುಖಂಡರು ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿಕೊಟ್ಟರು. ಈ ಸಲ ಕೋಲಾರಕ್ಕೆ ಹೋಗುತ್ತಿದ್ದಾರೆ. ಕೋಲಾರದಲ್ಲೂ ಅವರು ನಿಲ್ಲೋದಿಲ್ಲ. ಮತ್ತೆ ವರುಣಾಗೆ ಓಡಿ ಹೋಗೋದು. ಆದರೆ ವರುಣಾದಲ್ಲಿ ಯಾರು ನಿಲ್ಲಬೇಕೆಂದು ಬಿಎಸ್​ವೈ ನಿರ್ಧಾರ ಮಾಡುತ್ತಾರೆ. ನಾನೆಂದೂ ತಿಂದುಂಡ ಮನೆಗೆ ಜಂತಿ ಎಣಿಸುವ ಕೆಲಸ ಮಾಡಿಲ್ಲ. ಸಿದ್ದರಾಮಯ್ಯ ದೊಡ್ಡ ಮನುಷ್ಯ, ದೇವೇಗೌಡರ ಹೆಸರು ಹೇಳಿಕೊಂಡು ಬಂದು ಬೆನ್ನಿಗೆ ಚೂರಿ ಹಾಕಿದರು. ಪರಮೇಶ್ವರ, ಖರ್ಗೆ ಸೇರಿದಂತೆ ಎಲ್ಲರನ್ನು ಮುಗಿಸುತ್ತಲೇ ಬಂದರು. ಇದನ್ನು ನೋಡಿದರೆ ದೊಡ್ಡ ಪಟ್ಟಿಯೇ ಆಗುತ್ತೆ ಎಂದು ಶ್ರೀರಾಮಲು ಭಾಷಣ ಉದ್ದಕ್ಕೂ ಸಿದ್ದರಾಮಯ್ಯನವರು ವಿರುದ್ದ ವಾಗ್ದಾಳಿ ನಡೆಸಿದರು.

ಮೊಳಕಾಲ್ಮೂರು ಕ್ಷೇತ್ರದಿಂದ ಮತ್ತೆ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ನಾನು ಮೊಳಕಾಲ್ಮೂರು ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತಿದ್ದೇನೆ. ಎಲ್ಲಿ ನಿಲ್ಲಬೇಕು ಅಂತಾ ಪಾರ್ಟಿ ಏನೂ ತೀರ್ಮಾನ ಕೈಗೊಂಡಿಲ್ಲ. ಪಕ್ಷ ಏನು ಸೂಚನೆ ಕೊಡುತ್ತದೋ ಅದರ ಪ್ರಕಾರ ಕೆಲಸ ಮಾಡ್ಕೊಂಡು ಹೋಗ್ತೀನಿ. ಪಾರ್ಟಿ ಸೂಚನೆ ಕೊಟ್ಟ ತಕ್ಷಣ ತಿಳಿಸುತ್ತೇನೆ‌ ಎಂದರು.

ಎಸ್​ಟಿ ಸರ್ಟಿಫಿಕೇಟ್ ಗೊಂದಲ ವಿಚಾರವಾಗಿ ಮಾತನಾಡಿದ ಸಚಿವರು, ನಾನು ಸಂಬಂಧಿಸಿದ ಅಧಿಕಾರಿಗಳ ಜತೆ ಮಾತಾಡುತ್ತೇನೆ. ಸಿಎಂ ಗಮನಕ್ಕೂ ತರುತ್ತೇನೆ ಎಂದರು. ಜನಾರ್ದನ ರೆಡ್ಡಿ ಕಾಂಗ್ರೆಸ್‌ಗೆ ಹೋಗ್ತಾರೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀರಾಮಲು, ನನಗೆ ಯಾವುದೇ ಮಾಹಿತಿ ಇಲ್ಲ. ಯಾಕಂದ್ರೆ ಬಹಳ ಸಲ ಭೇಟಿ ಆದಾಗ, ಅವರು ಕೆಲವು ಆಂತರಿಕ ವಿಚಾರಗಳನ್ನು ಹೇಳಿದ್ದಾರೆ. ಆ ವಿಚಾರಗಳನ್ನ ನಮ್ಮ ನಾಯಕರಾದ ಸಿಎಂ ಬೊಮ್ಮಾಯಿ ಅವರಿಗೂ, ರಾಷ್ಟ್ರೀಯ ನಾಯಕರ ಗಮನಕ್ಕೂ ತಂದಿದ್ದೇನೆ ಎಂದರು.

ಇದನ್ನೂ ಓದಿ:ಮುಂದಿನ ಚುನಾವಣೆಯಲ್ಲೂ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಸಿದ್ದರಾಮಯ್ಯ ಒಲವು.. ಹೇಗಿದೆ ಲೆಕ್ಕಾಚಾರ?

ABOUT THE AUTHOR

...view details