ಬಾಗಲಕೋಟೆ:ಸಚಿವ ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಪಕ್ಷ ಒತ್ತಾಯಿಸಿರುವ ಬಗ್ಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನುಣುಚಿಕೊಳ್ಳುವ ಪ್ರಯತ್ನ ಮಾಡಿದರು. ಬಾಗಲಕೋಟೆ ನಗರದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದ ಸಮಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ನನಗೆ ಇಂದು ನಿರಂತರ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ಟಿವಿ ನೋಡೋಕಾಗಿಲ್ಲ. ಈ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ ಎಂದರು.
ಕಾಂಗ್ರೆಸ್ನವರದ್ದು ಸಾವಿನಲ್ಲೂ ರಾಜಕೀಯ: ಶಿಕ್ಷಣ ಸಚಿವ ನಾಗೇಶ - ಶಿಕ್ಷಣ ಸಚಿವ ನಾಗೇಶ
ಕಾಂಗ್ರೆಸ್ನವರಿಗೆ ಯಾವ ವಿಷಯವೂ ಸಿಕ್ಕಿಲ್ಲ. ಹಿಜಾಬ್, ನೈತಿಕ ಶಿಕ್ಷಣ, ಹಲಾಲ್ ಹೀಗೆ ಇವನ್ನೆಲ್ಲಾ ಬಳಸಿ ಸರ್ಕಾರವನ್ನು ಸಂಕಷ್ಟಕ್ಕೆ ತಳ್ಳುವ ಪ್ರಯತ್ನ ಪಟ್ಟರೂ ವಿಫಲವಾಯಿತು. ಈಗ ಸಾವಿನಲ್ಲೂ ರಾಜಕೀಯ ಹುಡುಕುತ್ತಾರೆ ಎಂದು ಸಚಿವ ನಾಗೇಶ್ ಟೀಕಿಸಿದರು.
![ಕಾಂಗ್ರೆಸ್ನವರದ್ದು ಸಾವಿನಲ್ಲೂ ರಾಜಕೀಯ: ಶಿಕ್ಷಣ ಸಚಿವ ನಾಗೇಶ Contractor Santosh Patil](https://etvbharatimages.akamaized.net/etvbharat/prod-images/768-512-15002086-thumbnail-3x2-bng.jpg)
ಶಿಕ್ಷಣ ಸಚಿವ ಬಿ.ಸಿ. ನಾಗೇಶ
ಕಾಂಗ್ರೆಸ್ನವರಿಗೆ ಯಾವ ವಿಷಯವೂ ಸಿಕ್ಕಿಲ್ಲ. ಹಿಜಾಬ್, ನೈತಿಕ ಶಿಕ್ಷಣ, ಹಲಾಲ್ ಹೀಗೆ ಇವನ್ನೆಲ್ಲಾ ಬಳಸಿ ಸರ್ಕಾರವನ್ನು ಸಂಕಷ್ಟಕ್ಕೆ ತಳ್ಳುವ ಪ್ರಯತ್ನ ಪಟ್ಟರೂ ವಿಫಲವಾಯಿತು. ಈಗ ಸಾವಿನಲ್ಲಿ ರಾಜಕೀಯ ಹುಡುಕುತ್ತಾರೆ. 40 ಪರ್ಸೆಂಟೇಜ್ ವಿಚಾರ ಹಳೇದು, ಅದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದರು.
ಇದನ್ನೂ ಓದಿ:ಬಿಎಸ್ವೈ ಭೇಟಿ ಮಾಡಿ ಚರ್ಚಿಸಿದ ಸಿಎಂ : ಇಂದೇ ರಾಜೀನಾಮೆ ನೀಡ್ತಾರಾ ಈಶ್ವರಪ್ಪ?