ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ಉಲ್ಲಂಘಿಸಿ, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದವರ ಬಂಧನ - ಬಾಗಲಕೋಟೆಯಲ್ಲಿ ಪೊಲೀಸರ ಮೇಲೆ ಹಲ್ಲೆ

ಸೋಂಕು ತಡೆಗೆ ಜಾರಿಗೊಳಿಸಿದ ನಿಯಮ ಉಲ್ಲಂಘಿಸಿ, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದವರನ್ನು ಬಂಧಿಸಿದ ಘಟನೆ ಬಾದಾಮಿ ತಾಲೂಕಿನ ಮುತ್ತಲಗೇರಿಯಲ್ಲಿ ನಡೆದಿದೆ. ಐವರಲ್ಲಿ ನಾಲ್ವರನ್ನು ಬಂಧಿಸಲಾಗಿದೆ.

lock down order violation in bagalkote
ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದವರ ಬಂಧನ

By

Published : Apr 16, 2020, 9:25 PM IST

ಬಾಗಲಕೋಟೆ:ಲಾಕ್​ಡೌನ್ ಉಲ್ಲಂಘಿಸಿ ಗ್ರಾಮದಲ್ಲಿ ಬೇಕಾಬಿಟ್ಟಿ ಸಂಚರಿಸಿ, ಬುದ್ಧಿ ಹೇಳಿದ ಪೊಲೀಸರ ಜೊತೆ ವಾಗ್ವಾದ ಮಾಡಿ, ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಮುತ್ತಲಗೇರಿ ಗ್ರಾಮದಲ್ಲಿ ನಡೆದಿದೆ.

ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದವರ ಬಂಧನ

ಪೊಲೀಸರ ಸಮವಸ್ತ್ರ ಹಿಡಿದು ಎಳೆದಾಡಿ, ಲಾಠಿ ಕಸಿದು ಪೊಲೀಸರ ಮೇಳೆ ಹಲ್ಲೆಗೆ ಮುಂದಾಗಿದ್ದಾರೆ‌. ಮುತ್ತಲಗೇರಿ ಗ್ರಾಮದ ಒಂದು ಕುಟುಂಬಸ್ಥರಿಂದ ಪೊಲೀಸರ ಜೊತೆ ಅನುಚಿತ ವರ್ತನೆ ನಡೆದಿದೆ.

ಆರೋಪಿಗಳಾದ ರಾಮಣ್ಣ ಹೊಟ್ಟಿ, ಸೀತವ್ವ ಹೊಟ್ಟಿ, ದೇವೆಂದ್ರಪ್ಪ ಹೊಟ್ಟಿ, ರವಿ ಹೊಟ್ಟಿ, ಶೋಭಾ ಹೊಟ್ಟಿ ಎಂಬುವರಿಂದ ಪೊಲೀಸರ ಮೇಲೆ ದರ್ಪ ನಡೆಸಿದರು.‌

ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದವರ ಬಂಧನ

ಸದ್ಯ ಐವರ ವಿರುದ್ದ ಬಾದಾಮಿ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಿ, ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ.

ABOUT THE AUTHOR

...view details