ಕರ್ನಾಟಕ

karnataka

ETV Bharat / state

ಕೊರೊನಾ ಪಿಡುಗು ತಡೆಗೆ ಮುನ್ನೆಚ್ಚರಿಕೆ: ಚೆಕ್‍ಪೋಸ್ಟ್​ಗೆ ಡಿಸಿ,ಎಸ್ಪಿ ಭೇಟಿ, ಪರಿಶೀಲನೆ - ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ

ಚೆಕ್‍ಪೋಸ್ಟ್​ಗಳ ಮೂಲಕ ಹೋಗುವವರ ಬಗ್ಗೆ ತೀವ್ರ ನಿಗಾವಹಿಸಬೇಕು. ಕೊರೊನಾ ಪರೀಕ್ಷೆಗೆ ಒಳಪಡಿಸಿದವರ ಮಾಹಿತಿಯ ವರದಿಯನ್ನು ಪ್ರತಿದಿನ ನೀಡಬೇಕೆಂದು ಚೆಕ್‍ಪೋಸ್ಟ್ ಸಿಬ್ಬಂದಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

bagalkot-district
ಕೋವಿಡ್-19: ಚೆಕ್‍ಪೋಸ್ಟ್​ಗೆ ಭೇಟಿ ನೀಡಿದ ಡಿಸಿ,ಎಸ್ಪಿ

By

Published : Mar 27, 2020, 9:23 AM IST

ಬಾಗಲಕೋಟೆ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸ್ಥಾಪಿಸಲಾದ ಚೆಕ್‍ಪೋಸ್ಟ್​ಗಳಿಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಜಂಟಿಯಾಗಿ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹುನಗುಂದ ತಾಲೂಕಿನ ನಂದವಾಡಗಿ, ಇಲಕಲ್ಲ ತಾಲೂಕಿನ ಹನಮನಾಳ ಹಾಗೂ ಬಾದಾಮಿ ತಾಲೂಕಿನ ಗೋವಿಂದಕೊಪ್ಪ ಚೆಕ್‍ಪೋಸ್ಟ್‍ಗಳಿಗೆ ತೆರಳಿ ಕರ್ತವ್ಯ ನಿರತ ಸಿಬ್ಬಂದಿಯ ಕಾರ್ಯವೈಖರಿ ಪರಿಶೀಲಿಸಿದರು.

ಚೆಕ್‍ಪೋಸ್ಟ್​ಗಳ ಮೂಲಕ ಹೋಗುವವರ ಬಗ್ಗೆ ತೀವ್ರ ನಿಗಾವಹಿಸಬೇಕು. ಕೊರೊನಾ ಪರೀಕ್ಷೆಗೆ ಒಳಪಡಿಸಿದವರ ಮಾಹಿತಿಯ ವರದಿಯನ್ನು ಪ್ರತಿದಿನ ನೀಡಬೇಕೆಂದು ಚೆಕ್‍ಪೋಸ್ಟ್ ಸಿಬ್ಬಂದಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

For All Latest Updates

ABOUT THE AUTHOR

...view details