ಕರ್ನಾಟಕ

karnataka

ETV Bharat / state

ರೈತರಿಂದ ತರಕಾರಿ ಖರೀದಿಸಿ ಬಡವರಿಗೆ ವಿತರಿಸಿದ ಮಾಜಿ ಸಚಿವ ತಿಮ್ಮಾಪೂರ್​ - dk shivakumar

ಮುಧೋಳ ಮತಕ್ಷೇತ್ರದ ವಿವಿಧ ರೈತರಿಂದ ತರಕಾರಿ ಖರೀದಿಸಿದ ತಿಮ್ಮಾಪೂರ್​, ತರಕಾರಿ ಸಿಗದೆ ನಗರದಲ್ಲಿ ಅಲೆದಾಡುವ ಜನತೆಗೆ ವಿತರಣೆ ಮಾಡಿದರು.

former mla thimmapuru buys essential vegetables from farmers in Bagalkot
ರೈತರಿಂದ ನೇರವಾಗಿ ತರಕಾರಿ ಖರೀದಿಸಿ ಹಂಚುತ್ತಿರುವ ಮಾಜಿ ಸಚಿವ ತಿಮ್ಮಾಪೂರ್​

By

Published : Apr 16, 2020, 5:58 PM IST

ಬಾಗಲಕೋಟೆ: ಕೋವಿಡ್-19ನಿಂದ ಜನರು ಭಯಭೀತರಾಗಿದ್ದು, ರೈತ ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾನೆ. ಇದರಿಂದ ರೈತರಿಗೂ ಅನುಕೂಲ ಆಗಬೇಕು. ಲಾಕ್​​ಡೌನ್​ನಿಂದ ತೊಂದರೆಗೆ ಒಳಗಾಗಿದವರಿಗೂ ಅನುಕೂಲ ಆಗಬೇಕು ಎಂಬ ಉದ್ದೇಶದಿಂದ ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ‌ಪಕ್ಷದ ಮುಖಂಡ ಆರ್.ಬಿ.ತಿಮ್ಮಾಪೂರ ರೈತರಿಂದ ನೇರವಾಗಿ ತರಕಾರಿ ‌ಖರೀದಿ ಮಾಡಿ ಜನಸಾಮಾನ್ಯರಿಗೆ ವಿತರಣೆ ಮಾಡುತ್ತಿದ್ದಾರೆ.

ಮುಧೋಳ ಮತಕ್ಷೇತ್ರದ ವಿವಿಧ ರೈತರಿಂದ ಖರೀದಿ ಮಾಡಿ, ತರಕಾರಿ ಸಿಗದೆ ನಗರದಲ್ಲಿ ಅಲೆದಾಡುವ ಜನತೆಗೆ ವಿತರಣೆ ಮಾಡಿದರು. ಕಳೆದ ತಿಂಗಳ 22ರಿಂದ ದೇಶವೇ ಲಾಕ್​ಡೌನ್ ಆಗಿದೆ. ಈ ಹಿನ್ನೆಲೆ ಸಾರ್ವಜನಿಕರು ಹೊರಗೆ ಬರದೆ ಮನೆಯಲ್ಲಿ ಇರುವ ಪರಿಸ್ಥಿತಿ ಎದುರಾಗಿದೆ. ಮತ್ತೆ ಮೇ 3ರವರೆಗೆ ಲಾಕ್​ಡೌನ್​ ವಿಸ್ತರಿಸಲಾಗಿದೆ. ಆರೋಗ್ಯ ದೃಷ್ಟಿಯಿಂದ ಲಾಕ್​ಡೌನ್​​ಅನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸುವುದು ಒಳ್ಳೆಯದು ಎಂದು ತಿಮ್ಮಾಪೂರ ಹೇಳಿದರು.

ರೈತರಿಂದ ನೇರವಾಗಿ ತರಕಾರಿ ಖರೀದಿಸಿ ಹಂಚುತ್ತಿರುವ ಮಾಜಿ ಸಚಿವ ತಿಮ್ಮಾಪೂರ್​

ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಮಾರ್ಗದರ್ಶನದಂತೆ ಮುಧೋಳ ನಗರದಲ್ಲಿ 31 ವಾರ್ಡ್​ಗಳ ಮನೆ ಮನೆಗೆ ತೆರಳಿ ಉಚಿತವಾಗಿ ತರಕಾರಿ ಹಂಚುವ ಸೇವೆಯನ್ನು ಪ್ರಾರಂಭಿಸಲಾಗಿದೆ ಎಂದರು.

ನಗರಸಭೆಯ ಸದಸ್ಯರು ಸೇರಿದಂತೆ ಆ ಭಾಗದ ಹಿರಿಯರು ಕಾರ್ಯಕರ್ತರು ಬೆಳಗ್ಗೆ ಮನೆ ಮನೆಗೆ ತೆರಳಿ ಪ್ರತಿ ದಿನವು 100 ಮನೆಗಳಿಗೆ ವಿವಿಧ ರೀತಿಯ ತರಕಾರಿಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದರು.

ABOUT THE AUTHOR

...view details