ಕರ್ನಾಟಕ

karnataka

ಕಬ್ಬಿನ ಬೆಳಗೆ 3500 ರೂ. ದರ ನಿಗದಿ ಮಾಡಲು ಒತ್ತಾಯಿಸಿ ರೈತ ಸಂಘದಿಂದ ಸಭೆ

By

Published : Oct 19, 2020, 11:49 AM IST

ಕಬ್ಬಿನ ಬೆಳೆಗೆ ಸಕ್ಕರೆ ಕಾರ್ಖಾನೆಗಳಿಂದ 3500 ರೂ. ದರ ನೀಡಬೇಕೆಂದು ಒತ್ತಾಯಿಸಿ ಮುಧೋಳ ನಗರದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ, ಕಬ್ಬು ಬೆಳೆಗಾರ ಸಂಘದಿಂದ ಬೃಹತ್ ಸಭೆ ನಡೆಸಲಾಯಿತು.

ರೈತ ಸಂಘದಿಂದ ಪ್ರತಿಭಟನೆ
ರೈತ ಸಂಘದಿಂದ ಪ್ರತಿಭಟನೆ

ಬಾಗಲಕೋಟೆ:ಪ್ರಸಕ್ತ ವರ್ಷ ಕಬ್ಬಿನ ಬೆಳೆಗೆ ಸಕ್ಕರೆ ಕಾರ್ಖಾನೆಗಳಿಂದ 3500 ರೂ. ದರ ನೀಡಬೇಕೆಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್​ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಒತ್ತಾಯಿಸಿದ್ದಾರೆ.

ಮುಧೋಳ ನಗರದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ, ಕಬ್ಬು ಬೆಳೆಗಾರ ಸಂಘದಿಂದ ಆಯೋಜಿಸಿದ್ದ ಬೃಹತ್ ಸಭೆಯಲ್ಲಿ ಅವರು ಮಾತನಾಡಿದರು. 2013ರಿಂದ 2020ರವರೆಗೆ ಕಬ್ಬಿನ ದರದಲ್ಲಿ ಪರಿಷ್ಕರಣೆಯಾಗಿಲ್ಲ. ಉತ್ತರ ಕರ್ನಾಟಕದ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜತೆ ಸಭೆ ಮಾಡಿ ಆದೇಶ ಹೊರಡಿಸಬೇಕು. ರೈತರಿಗೆ ದೊರೆಯಬೇಕಾಗಿದ್ದ ಎಸ್‍ಎಪಿ ಹಿಂದಿನ ಕಾಯ್ದೆಗಳೆಲ್ಲವೂ ಅಸ್ಥಿ ಪಂಜರದಂತಾಗಿವೆ. ನಿಜವಾಗಿ ರೈತರ ಬಗ್ಗೆ ಕಾಳಜಿ ಇದ್ದರೆ ಮೊದಲು ಕಬ್ಬಿನ ದರದಲ್ಲಿ ಅಮೂಲಾಗ್ರ ಬದಲಾವಣೆ ಘೋಷಣೆಯಾಗಬೇಕು ಎಂದರು.

ಕಾರ್ಖಾನೆಯನ್ನು ಆರಂಭಿಸುವ ಮುಂಚೆ ಕಬ್ಬಿನ ಬಾಕಿ ಪಾವತಿಯಾಗಬೇಕು. ಮಹಾರಾಷ್ಟ್ರ ಮಾದರಿಯಂತಹ ಎಕ್ಸೆಪೈಡ್ ನಿಗದಿಯಾಗಬೇಕು. ಪ್ರಸಕ್ತ ವರ್ಷದಲ್ಲಿ ದರ ನಿಗದಿಯಾಗುವರಿಗೂ ಕಬ್ಬು ಕಟಾವು ಮಾಡಬಾರದು. ನಿಮ್ಮ ರಾಜಕೀಯ ಏನೇ ಇರಲಿ ಮೊದಲು ರೈತ ಕುಲವನ್ನು ಸಂರಕ್ಷಣೆ ಮಾಡಿ. ಕೋವಿಡ್, ಪ್ರವಾಹ ನಂತರ ರೈತ ಸಂಕಷ್ಟ ಅನುಭವಿಸಿದ್ದಾನೆ ಎಂದರು.

ಇಲ್ಲಿವರೆಗಿನ ಎಲ್ಲಾ ಮುಖ್ಯಮಂತ್ರಿಗಳು ಕಬ್ಬಿನ ಮಾಲೀಕರ ಮೇಲೆ ಒತ್ತಡ ಹೇರಿ ನಿಗದಿಪಡಿಸಿದ ದರ ಕೊಡಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸರ್ಕಾರದ ನೀತಿಗಳಿಂದ ರೈತರಿಗೆ ಅನ್ಯಾಯವಾಗುತ್ತಿದೆ. ತಮ್ಮದೇ ಆದ ಶಾಸಕರ ಬಳಿ ಇರುವ ಸಕ್ಕರೆ ಕಾರ್ಖಾನೆಗಳಿಂದ ದರ ಕೊಡಿಸಿ ರೈತರಿಗೆ ನ್ಯಾಯ ನೀಡಿ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ ಮಾತನಾಡಿ, ಕಳೆದ ವರ್ಷದಿಂದ ರೈತರ ಕಷ್ಟಗಳು ಮತ್ತಷ್ಟು ಹೆಚ್ಚಾಗಿವೆ. ರೈತರ ಬಾಕಿ ಪಾವತಿಯಾಗಬೇಕು. ಪ್ರೈತರು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಒಗ್ಗಟ್ಟು ಪ್ರದರ್ಶನ ಮಾಡಿದರೆ ರೈತರು ಉಳಿಯುತ್ತಾರೆ. ಪ್ರತಿ ಮನೆಗೊಬ್ಬರು ರೈತ ಸಂಘದ ಸದಸ್ಯನಾಗಬೇಕೆಂದರು.

ಯುವ ಮುಖಂಡ ಶಂಕರ ನಾಯಕ ಮಾತನಾಡಿ, ಕೇಂದ್ರ ಸರ್ಕಾರದ ನೀತಿಗಳಿಂದ ರೈತ ಇಂದು ಸಂಕಷ್ಟಕ್ಕೆ ಬಂದು ತಲುಪಿದ್ದಾನೆ. ಬಹುರಾಷ್ಟ್ರೀಯ ಕಂಪನಿಗಳಿಂದ ರೈತರಿಗೆ ಅನ್ಯಾಯವಾಗಲಿದೆ. ಹಳ್ಳಿಗಳನ್ನು ಖರೀದಿ ಮಾಡಲು ಕಂಪನಿಗಳು ಬರುತ್ತಿವೆ. ರೈತರು ಎಚ್ಚರ ವಹಿಸಬೇಕೆಂದರು.

ABOUT THE AUTHOR

...view details