ಕರ್ನಾಟಕ

karnataka

ಸರ್​ಎಂವಿ ಆದರ್ಶಗಳನ್ನು ಪಾಲಿಸಿ: ಎಂಜಿನಿಯರ್​ಗಳಿಗೆ ಬಾಗಲಕೋಟೆ ಜಿಲ್ಲಾಧಿಕಾರಿ ಕರೆ

By

Published : Sep 15, 2019, 7:30 PM IST

Updated : Sep 15, 2019, 8:20 PM IST

ವಿಶ್ವೇಶ್ವರಯ್ಯ ಅವರಂತಹ ಮಹಾನ್ ಶ್ರೇಷ್ಠರ ಆದರ್ಶಗಳನ್ನು ಪಾಲಿಸಿಕೊಂಡು ಇಂದಿನ ಎಂಜಿನಿಯರ್​​ಗಳು ಕೆಲಸ ಮಾಡಬೇಕೆಂದು ಬಾಗಲಕೋಟೆ ಜಿಲ್ಲಾಧಿಕಾರಿ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಎಂಜಿನಿಯರ್ ದಿನಾಚರಣೆ

ಬಾಗಲಕೋಟೆ: ವಿಶ್ವೇಶ್ವರಯ್ಯನವರು ಮಾಡಿದ ಯೋಜನೆಗಳು ಈಗಲೂ ಶಾಶ್ವತವಾಗಿದ್ದು, ಎಲ್ಲಾ ಜನತೆಗೆ ಅನುಕೂಲಕರವಾಗಿವೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಎಂಜಿನಿಯರ್ ದಿನಾಚರಣೆ

ಸರ್.ಎಂ.ವಿಶ್ವೇಶ್ವರಯ್ಯ ಅವರ ಹುಟ್ಟುಹಬ್ಬ ಪ್ರಯುಕ್ತ ವಿದ್ಯಾಗಿರಿಯ ನಿರ್ಮಿತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಎಂಜಿನಿಯರ್ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಂಜಿನಿಯರ್​ಗಳು ಮುಂದಾಲೋಚನೆಯಿಂದ ಕೆಲಸ ಮಾಡಬೇಕಾಗುತ್ತದೆ. ಸಾಮಾನ್ಯ ಜನತೆಗೆ ಅನುಕೂಲ ಆಗುವಂತೆ ಕೆಲಸ ಕಾರ್ಯ ಹಮ್ಮಿಕೊಳ್ಳಬೇಕಾಗುತ್ತದೆ. ವಿಶ್ವೇಶ್ವರಯ್ಯ ಅವರಂತಹ ಮಹಾನ್ ಶ್ರೇಷ್ಠರ ಆದರ್ಶಗಳನ್ನು ಪಾಲಿಸಿಕೊಂಡು ಇಂದಿನ ಎಂಜಿನಿಯರ್​​ಗಳು ಕೆಲಸ ಕಾರ್ಯ ಮಾಡಬೇಕಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಬಾಗವಹಿಸಿದ್ದ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್, ಸಿಇಒ ವಿಕ್ರಮ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ ಸೇರಿದಂತೆ ಇತರ ಅಧಿಕಾರಗಳು ಸರ್.ಎಂ.ವಿಶ್ವೇಶ್ವರಯ್ಯ ಪುತ್ಥಳಿಗೆ ಮಾರ್ಲಾಪಣೆ ಮಾಡುವ ಜೊತೆಗೆ ಪುಷ್ಪ ಸರ್ಮಪಣೆ ಮಾಡಿದರು. ನಂತರ ನಿರ್ಮಿತ ಕೇಂದ್ರದ ಅಧಿಕಾರಿ ಎಂಜನಿಯರ್ ಆಗಿರುವ ಶಂಕರ ಗೂಗಿ ಅವರನ್ನು ಸನ್ಮಾನಿಸಿ ಅವರ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

Last Updated : Sep 15, 2019, 8:20 PM IST

ABOUT THE AUTHOR

...view details