ಕರ್ನಾಟಕ

karnataka

ETV Bharat / state

ಪರಿಸರ ಪ್ರೇಮಿ ಅರಣ್ಯ ರಕ್ಷಕ.. ವೇಸ್ಟ್​ ಬಾಟಲ್​, ಸೀರಿಂಜ್​ ಮೂಲಕ ಹನಿ ನೀರಾವರಿ - undefined

ಪ್ಲಾಸ್ಟಿಕ್ ವಸ್ತುಗಳನ್ನು ವೇಸ್ಟ್​ ಮಾಡಿ ಎಸೆಯುವ ಬದಲು, ಅದರ ಮರು ಬಳಕೆ ಮಾಡುವ ಅಗತ್ಯವಿದೆ. ಜಿಲ್ಲೆಯ ಅಮೀನಗಡ ವಲಯದ ಅರಣ್ಯ ರಕ್ಷಕರೊಬ್ಬರು ಖಾಲಿಯಾದ ನೀರಿನ ಬಾಟಲ್​ಗಳ ಮೂಲಕ ನೀರುಣಿಸುವ ವ್ಯವಸ್ಥೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಪರಿಸರ ಪ್ರೇಮಿ ಅರಣ್ಯ ರಕ್ಷಕ..

By

Published : Jul 6, 2019, 11:47 AM IST

Updated : Jul 6, 2019, 1:41 PM IST

ಬಾಗಲಕೋಟೆ: ಪ್ಲಾಸ್ಟಿಕ್ ವಸ್ತುಗಳನ್ನು ವೇಸ್ಟ್​ ಮಾಡಿ ಎಸೆಯುವ ಬದಲು, ಅದರ ಮರುಬಳಕೆ ಮಾಡುವ ಅಗತ್ಯವಿದೆ. ಜಿಲ್ಲೆಯ ಅಮೀನಗಡ ವಲಯದ ಅರಣ್ಯ ರಕ್ಷಕರೊಬ್ಬರು ಖಾಲಿಯಾದ ನೀರಿನ ಬಾಟಲ್​ಗಳ ಮೂಲಕ ನೀರುಣಿಸುವ ವ್ಯವಸ್ಥೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ವಿನೋದ್​​ ಬೊಂಬ್ಲೆಕರ್ ಎಂಬ ಅರಣ್ಯ ರಕ್ಷಕರು ರಸ್ತೆ ಬದಿ ಬೆಳೆಸುವ ಮರಗಳಿಗೆ ಪ್ಲಾಸ್ಟಿಕ್​ ಬಾಟಲ್​ಗಳ ಮೂಲಕ ಹನಿ‌ ನೀರಾವರಿ ಮಾಡಿದ್ದಾರೆ. 2 ಲೀ. ನೀರಿನ ಬಾಟಲ್ ಹಾಗೂ ಸಲೈನ್ ವೈರ್ ಬಳಿಸಿ ಸಸಿಗಳಿಗೆ‌ ಹನಿ ನೀರಾವರಿ ಮಾಡುತ್ತಿದ್ದಾರೆ.

ಪರಿಸರ ಪ್ರೇಮಿ ಅರಣ್ಯ ರಕ್ಷಕ..

ಅಮೀನಗಡ ವಲಯದಲ್ಲಿ ಬರುವ ರಾಮಥಾಳ ಹಾಗೂ ಕಳ್ಳಿಗುಡ್ಡ ರಸ್ತೆ ಬದಿಯುದ್ದಕ್ಕೂ ಸುಮಾರು 400 ಕ್ಕೂ ಹೆಚ್ಚು ಸಸಿಗಳನ್ನು ಬೆಳೆಸಲಾಗುತ್ತಿದೆ. ಅವುಗಳಿಗೆ 2 ಲೀ. ವಾಟರ್ ಬಾಟಲಿ, ಸೀರಿಂಜ್ ವೈರ್​ ಮೂಲಕ ಹನಿ-ಹನಿಯಾಗಿ ನೀರು ಬೀಳುವಂತೆ ವ್ಯವಸ್ಥೆ ಮಾಡಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Last Updated : Jul 6, 2019, 1:41 PM IST

For All Latest Updates

TAGGED:

ABOUT THE AUTHOR

...view details