ಕರ್ನಾಟಕ

karnataka

By

Published : Jul 6, 2021, 10:18 AM IST

ETV Bharat / state

ರೈತನ ಪ್ರಾಣ ಹೋಗಿದ್ದರೂ ಮಾನವೀಯತೆ ಮರೆತು ವರ್ತಿಸಿದ್ರು: ಸಚಿವ ಸವದಿ ಪುತ್ರನ ವಿರುದ್ಧ ಮೃತನ ಕುಟುಂಬಸ್ಥರು ಕಿಡಿ

ಸಚಿವರ ಪುತ್ರರಾಗಿದ್ದುಕೊಂಡು ಕನಿಷ್ಠ ಸಾಂತ್ವನ ಹೇಳುವ ಕಾರ್ಯವನ್ನೂ ಮಾಡಿಲ್ಲ ಎಂದು ಸಚಿವ ಲಕ್ಷಣ್​ ಸವದಿಯ ಪುತ್ರನ ವಿರುದ್ಧ ಮೃತ ರೈತನ ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

DCM Savadi Son's Car accident
ಚಿದಾನಂದ ಸವದಿ ವಿರುದ್ಧ ಮೃತನ ಕುಟುಂಬಸ್ಥರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು

ಬಾಗಲಕೋಟೆ:ನಿನ್ನೆ ಸಂಜೆ ಸಾರಿಗೆ ಸಚಿವ, ಡಿಸಿಎಂ ಲಕ್ಷಣ್​ ಸವದಿ ಅವರ ಪುತ್ರ ಚಿದಾನಂದ ಸವದಿ ಕಾರು ಡಿಕ್ಕಿಯಾಗಿ ಹುನಗುಂದ ತಾಲೂಕಲ್ಲಿ ರೈತ ಮೃತಪಟ್ಟಿದ್ದಾನೆ. ಸವದಿ ಪುತ್ರ ಮಾನವೀಯತೆ ಮರೆತವರಂತೆ ವರ್ತಿಸಿದ್ರು ಎಂದು ರೈತನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಕುಮಾರೇಶ್ವರ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಮೃತನ ಕುಟುಂಬಸ್ಥರು, ಸಚಿವರ ಪುತ್ರರಾಗಿದ್ದುಕೊಂಡು ಮಾನವೀಯತೆ ಇಲ್ಲದೆ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಾರೆ. ಅಪಘಾತ ನಡೆದಾಗ ಕಾರಿನ ನಂಬರ್ ಪ್ಲೇಟ್ ತೆಗೆದು ಹಾಕಿ ಪರಾರಿಯಾಗಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಚಿದಾನಂದ ಸವದಿ ವಿರುದ್ಧ ಮೃತನ ಕುಟುಂಬಸ್ಥರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು

ಓದಿ : ಹುನಗುಂದ ಬಳಿ ಡಿಸಿಎಂ ಲಕ್ಷಣ್​ ಸವದಿ ಪುತ್ರನ ಕಾರು ಡಿಕ್ಕಿ: ಬೈಕ್ ಸವಾರ ಸಾವು

ಒಬ್ಬ ಜನಪ್ರತಿನಿಧಿಯ ಪುತ್ರನಾಗಿದ್ದುಕೊಂಡು ಮಾನವೀಯತೆ ದೃಷ್ಠಿಯಿಂದ ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಕಾರ್ಯವನ್ನು ಮಾಡಿಲ್ಲ ಎಂದು ಮೃತನ ಕುಟುಂಬಸ್ಥರು ಲಕ್ಷಣ ಸವದಿ ಪುತ್ರನ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details