ಬಾಗಲಕೋಟೆ:ಡಿಸಿಎಂ ಕ್ಷೇತ್ರ ಮಾತ್ರವಲ್ಲದೇ ಇನ್ನು ಕೆಲ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕದ ಸರಿಯಾದ ವ್ಯವಸ್ಥೆ ಇಲ್ಲದೇ, ಸಾರ್ವಜನಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಎಫೆಕ್ಟ್ ಇಂದು ಕಾರಜೋಳರಿಗೂ ತಟ್ಟಿದೆ.
ಕೈಕೊಟ್ಟ ಕರೆಂಟ್... ಮೊಬೈಲ್ ಟಾರ್ಚ್ ಬೆಳಕಲ್ಲೇ ಅಹವಾಲು ಪರಿಶೀಲಿಸಿದ ಕಾರಜೋಳ! - DCM recieved peoples problem letters
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆ ನಡೆಸುತ್ತಿರುವ ವೇಳೆ ವಿದ್ಯುತ್ ಕೈ ಕೊಟ್ಟಿರುವ ಹಿನ್ನೆಲೆ ಕತ್ತಲಿನಲ್ಲಿಯೇ ಸಭೆ ನಡೆಸಿ, ಅಹವಾಲು ಸ್ವೀಕಾರಿಸಿದ ಘಟನೆ ನಡೆದಿದೆ.
ಡಿಸಿಎಂ
ಮುಧೋಳ್ ಮತಕ್ಷೇತ್ರದ ತಿಮ್ಮಾಪುರ ಗ್ರಾಮದಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಬಳಿಕ ಜನರಿಂದ ಅಹವಾಲು ಸ್ವೀಕರಿಸುವ ವೇಳೆ ಕರೆಂಟ್ ಇಲ್ಲದಿದ್ದರೂ, ಮೊಬೈಲ್ ಬೆಳಕಿನಲ್ಲೇ ಅಹವಾಲುಗಳನ್ನು ಸ್ವೀಕರಿಸಿ, ಸ್ಥಳದಲ್ಲೇ ಇತ್ಯರ್ಥ ಪಡಿಸಿದರು.
ಅಹವಾಲು ಸ್ವೀಕರಿಸುವಾಗ ವಿದ್ಯುತ್ ಸಂಪರ್ಕ ಇಲ್ಲದೆ, ಜನರು ಮೊಬೈಲ್ ಟಾರ್ಚ್ ನೀಡಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳರಿಗೆ ಸಹಕರಿಸಿದರು. ಮನವಿ ಪತ್ರ ಸ್ವೀಕರಿಸಿದ ಡಿಸಿಎಂ, ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮಕ್ಕೆ ಮಾಹಿತಿ ನೀಡಿದರು.