ಬಾಗಲಕೋಟೆ:ಪ್ರವಾಸೋದ್ಯಮ ಅಭಿವೃದ್ಧಿಗೆ ವಿವಿಧ ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ಜಿ.ಪಂ. ಸಿಇಒ ಟಿ. ಭೂಬಾಲನ್ ನೇತೃತ್ವದ ತಂಡ ಬಾದಾಮಿಯ ವಿವಿಧ ಸ್ಮಾರಕಗಳನ್ನು ಪರಿಶೀಲಿಸಿತು.
2020-21ನೇ ಸಾಲಿನ ಬಜೆಟ್ನಲ್ಲಿ 25 ಕೋಟಿ ರೂ. ಘೋಷಣೆಯಾದ ಹಿನ್ನೆಲೆಯಲ್ಲಿ ಹಾಗೂ ಸರ್ಕಾರಕ್ಕೆ ವಿವಿಧ ಪ್ರಸ್ತಾವನೆ ಸಲ್ಲಿಸುವ ಸಲುವಾಗಿ, ಪೂರ್ವಭಾವಿಯಾಗಿ ಇಲ್ಲಿನ ವಿವಿಧ ಐತಿಹಾಸಿಕ ಮಹತ್ವದ ಸ್ಮಾರಕಗಳನ್ನು ಪರಿಶೀಲನೆ ನಡೆಸಲಾಯಿತು. ಜೊತೆಗೆ ಮನೆಗಳ ಸ್ಥಳಾಂತರ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಯಿತು.